<p><strong>ಪಾವಗಡ:</strong> ತಾಲ್ಲೂಕಿನ ಭೂಪೂರು ತಾಂಡದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ.</p>.<p>ಇದೇ ಗ್ರಾಮದ ಗೋಪಾಲನಾಯ್ಕ(40) ಹತ್ಯೆಯಾದವರು. ಮೃತರ ಸಂಬಂಧಿಗಳಾದ ತರುಣ್ ನಾಯ್ಕ, ಹೇಮಂತನಾಯ್ಕ, ಶ್ರೀರಂಗಪುರ ತಾಂಡದ ನಾಗರಾಜನಾಯ್ಕ ಅವರಿಗೆ ತೀವ್ರ ಗಾಯಗಳಾಗಿವೆ.</p>.<p>ಆರೋಪಿ ನಾಗರಾಜನಾಯ್ಕ ಸಹ ಗಾಯಗೊಂಡಿದ್ದಾನೆ</p>.<p>ಗ್ರಾಮದ ಕಟ್ಟೆಯ ಬಳಿ ಕುಳಿತಿದ್ದ ಗೋಪಾಲನಾಯ್ಕ ಸಂಬಂಧಿಕರಿಗೆ ಆರೋಪಿ ನಾಗರಾಜನಾಯ್ಕ್ನ ದ್ವಿಚಕ್ರ ವಾಹನ ತಗುಲಿಸಿದೆ. ಇದೇ ಕಾರಣಕ್ಕೆ ಜಗಳ ನಡೆದಿದೆ. ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದಾರೆ.</p>.<p>ಆರೋಪಿ ನಾಗರಾಜನಾಯ್ಕ ಮನೆ ಮುಂದೆ ಗೋಪಾಲನಾಯ್ಕ ಹೋಗುತ್ತಿದ್ದಾಗ ಮತ್ತೆ ಜಗಳ ಆರಂಭವಾಗಿದೆ. ಆಗ ನಾಗರಾಜನಾಯ್ಕನು ಗೋಪಾಲನಾಯ್ಕ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ನಡೆಸಿದ್ದಾನೆ.</p>.<p>ತೀವ್ರವಾಗಿ ಗಾಯಗೊಂಡ ಗೋಪಾಲನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.</p>.<p>ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ತಾಲ್ಲೂಕಿನ ಭೂಪೂರು ತಾಂಡದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ.</p>.<p>ಇದೇ ಗ್ರಾಮದ ಗೋಪಾಲನಾಯ್ಕ(40) ಹತ್ಯೆಯಾದವರು. ಮೃತರ ಸಂಬಂಧಿಗಳಾದ ತರುಣ್ ನಾಯ್ಕ, ಹೇಮಂತನಾಯ್ಕ, ಶ್ರೀರಂಗಪುರ ತಾಂಡದ ನಾಗರಾಜನಾಯ್ಕ ಅವರಿಗೆ ತೀವ್ರ ಗಾಯಗಳಾಗಿವೆ.</p>.<p>ಆರೋಪಿ ನಾಗರಾಜನಾಯ್ಕ ಸಹ ಗಾಯಗೊಂಡಿದ್ದಾನೆ</p>.<p>ಗ್ರಾಮದ ಕಟ್ಟೆಯ ಬಳಿ ಕುಳಿತಿದ್ದ ಗೋಪಾಲನಾಯ್ಕ ಸಂಬಂಧಿಕರಿಗೆ ಆರೋಪಿ ನಾಗರಾಜನಾಯ್ಕ್ನ ದ್ವಿಚಕ್ರ ವಾಹನ ತಗುಲಿಸಿದೆ. ಇದೇ ಕಾರಣಕ್ಕೆ ಜಗಳ ನಡೆದಿದೆ. ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದಾರೆ.</p>.<p>ಆರೋಪಿ ನಾಗರಾಜನಾಯ್ಕ ಮನೆ ಮುಂದೆ ಗೋಪಾಲನಾಯ್ಕ ಹೋಗುತ್ತಿದ್ದಾಗ ಮತ್ತೆ ಜಗಳ ಆರಂಭವಾಗಿದೆ. ಆಗ ನಾಗರಾಜನಾಯ್ಕನು ಗೋಪಾಲನಾಯ್ಕ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ನಡೆಸಿದ್ದಾನೆ.</p>.<p>ತೀವ್ರವಾಗಿ ಗಾಯಗೊಂಡ ಗೋಪಾಲನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.</p>.<p>ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>