<p><strong>ಹಾಗಲವಾಡಿ: </strong>ಇಲ್ಲಿನ ಮಠದ ಕೆರೆ, ಕರುಬರಹಳ್ಳಿ ಕೆರೆ, ಶೇಷೇನಹಳ್ಳಿ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡದಿದ್ದರೆ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಮುಖಂಡ ಶಿವಲಿಂಗಯ್ಯ ಎಚ್ಚರಿಸಿದರು.</p>.<p>ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮಪಂಚಾಯಿತಿ ಮತದಾರರು ಭಾನುವಾರ ನಡೆಸಿದ ಮುಷ್ಕರದಲ್ಲಿ ಮಾತನಾಡಿದರು.</p>.<p>ಹದಿನೆಂಟು ವರ್ಷಗಳಿಂದ ನೀರಿನ ಹೋರಾಟ ನಡೆಯುತ್ತಲೇ ಇದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ನೀರಿನ ಬವಣೆ ತೀರಿಸುವ ಮನಸ್ಸು ಮಾಡಿಲ್ಲ. ಈ ಕೆರೆಗಳಿಗೆ ನೀರುಹರಿಸಲು 2019ರ ಜುಲೈನಲ್ಲೇ ₹ 25.65 ಕೋಟಿ ಮಂಜೂರಾಗಿದ್ದರೂ, ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲು ಮೀನಾ<br />ಮೇಷ ಎಣಿಸುತ್ತಿದ್ದಾರೆ ಎಂದರು.</p>.<p>ಎರಡೂ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 36 ಸದಸ್ಯರಿದ್ದಾರೆ. ಆಕಾಂಕ್ಷಿಗಳು ತಮ್ಮ ಬೇಡಿಕೆ ಈಡೇರುವ<br />ವರಗೆ ಉಮೇದುವಾರಿಕೆ ಸಲ್ಲಿಸುವುದಿಲ್ಲ ಎಂದರು.</p>.<p>ತಹಸೀಲ್ದಾರ್ ಪ್ರದೀಪ್ ಕುಮಾರ್ ಮತದಾರರ ಮನವೊಲಿಸಿ ಮತದಾನ ಬಹಿಷ್ಕರಿಸಿದಂತೆ ಮನವಿ ಮಾಡಿದರು.</p>.<p>ನಲ್ಲೂರು ಶಿವಣ್ಣ, ಸೋಮಣ್ಣ, ರಮೇಶ್, ಬಾಬು, ನಾಗರಾಜು ಹಾಗೂ ಎರಡೂ ಗ್ರಾಮಪಂಚಾಯಿತಿ ಮತದಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಗಲವಾಡಿ: </strong>ಇಲ್ಲಿನ ಮಠದ ಕೆರೆ, ಕರುಬರಹಳ್ಳಿ ಕೆರೆ, ಶೇಷೇನಹಳ್ಳಿ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡದಿದ್ದರೆ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಮುಖಂಡ ಶಿವಲಿಂಗಯ್ಯ ಎಚ್ಚರಿಸಿದರು.</p>.<p>ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮಪಂಚಾಯಿತಿ ಮತದಾರರು ಭಾನುವಾರ ನಡೆಸಿದ ಮುಷ್ಕರದಲ್ಲಿ ಮಾತನಾಡಿದರು.</p>.<p>ಹದಿನೆಂಟು ವರ್ಷಗಳಿಂದ ನೀರಿನ ಹೋರಾಟ ನಡೆಯುತ್ತಲೇ ಇದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ನೀರಿನ ಬವಣೆ ತೀರಿಸುವ ಮನಸ್ಸು ಮಾಡಿಲ್ಲ. ಈ ಕೆರೆಗಳಿಗೆ ನೀರುಹರಿಸಲು 2019ರ ಜುಲೈನಲ್ಲೇ ₹ 25.65 ಕೋಟಿ ಮಂಜೂರಾಗಿದ್ದರೂ, ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲು ಮೀನಾ<br />ಮೇಷ ಎಣಿಸುತ್ತಿದ್ದಾರೆ ಎಂದರು.</p>.<p>ಎರಡೂ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 36 ಸದಸ್ಯರಿದ್ದಾರೆ. ಆಕಾಂಕ್ಷಿಗಳು ತಮ್ಮ ಬೇಡಿಕೆ ಈಡೇರುವ<br />ವರಗೆ ಉಮೇದುವಾರಿಕೆ ಸಲ್ಲಿಸುವುದಿಲ್ಲ ಎಂದರು.</p>.<p>ತಹಸೀಲ್ದಾರ್ ಪ್ರದೀಪ್ ಕುಮಾರ್ ಮತದಾರರ ಮನವೊಲಿಸಿ ಮತದಾನ ಬಹಿಷ್ಕರಿಸಿದಂತೆ ಮನವಿ ಮಾಡಿದರು.</p>.<p>ನಲ್ಲೂರು ಶಿವಣ್ಣ, ಸೋಮಣ್ಣ, ರಮೇಶ್, ಬಾಬು, ನಾಗರಾಜು ಹಾಗೂ ಎರಡೂ ಗ್ರಾಮಪಂಚಾಯಿತಿ ಮತದಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>