ವಿಧಾನಸಭೆ ಚುನಾವಣೆಯಲ್ಲಿ 40ರಿಂದ 50 ಸ್ಥಾನಗಳನ್ನು ಗೆಲ್ಲಲು ಕಷ್ಟ ಬೀಳಬೇಕಾಗಿಲ್ಲ. 123 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಸರ್ಕಾರ ರಚಿಸಿ, ಕೊಟ್ಟಿರುವ ‘ಪಂಚರತ್ನ’ ಭರವಸೆ ಈಡೇರಿಸಬೇಕಾಗಿದೆ. ಕಡಿಮೆ ಸ್ಥಾನಗಳನ್ನು ಗೆದ್ದು ಬಿಜೆಪಿ, ಕಾಂಗ್ರೆಸಿಗರ ಮನೆ ಬಾಗಿಲಿಗೆ ಹೋಗುವಂತೆ ಮಾಡಬೇಡಿ. ಇಬ್ಬರ ಸಹವಾಸವನ್ನು ಮಾಡಿ ಸಾಕಾಗಿದೆ. ಸ್ವತಂತ್ರವಾಗಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.