ತಾಲ್ಲೂಕಿನ ಹೆಬ್ಬೂರು ಸಮೀಪದ ಬನ್ನಿಕುಪ್ಪೆಯಿಂದ 8 ಕಿ.ಮೀ ದೂರದ ಬಡೆಸಾಬ್ ಪಾಳ್ಯದಲ್ಲಿ ಇಂದು ಮುಂಜಾನೆ ಈ ಚಿರತೆಯನ್ನು ಸೆರೆ ಹಿಡಿಯಲಾಗಿದೆ.ಹೆಬ್ಬೂರು, ಬನ್ನಿಕುಪ್ಪೆ ಸುತ್ತಮುತ್ತ ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಾ ಜನರಲ್ಲಿ ಆತಂಕ ಸೃಷ್ಟಿಸಿದ್ದವು. ದನ, ಕರು, ನಾಯಿಗಳ ಮೇಲೆ ದಾಳಿ ನಡೆಸಿಭಯ ಹುಟ್ಟಿಸಿದ್ದವು. ಒಂದು ನರಭಕ್ಷಕ ಚಿರತೆ ಬನ್ನಿಕುಪ್ಪೆ ಬಳಿ ಬಾಲಕನ ಮೇಲೆ ದಾಳಿ ಮಾಡಿ ಕೊಂದಿತ್ತು.