<p><strong>ಕೊರಟಗೆರೆ:</strong> ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಕಾರಣ ಎಲ್ಲಡೆ ಸ್ವಚ್ಛತೆ ಹಾಗೂ ಮುಂಜಾಗೃತ ಕ್ರಮ ವಹಿಸಲು ಹರಸಾಹಸ ಪಡುತ್ತಿದ್ದರೂ, ಪಟ್ಟಣದಲ್ಲಿ ಮಾತ್ರ ಇದಾವುದರ ಪರಿವೇ ಇಲ್ಲದೆ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.</p>.<p>ಪಟ್ಟಣದ ಬಹುತೇಕ ಚರಂಡಿಗಳು ಇಲ್ಲಿವರೆಗೂ ಸರಿಯಾಗಿ ಸ್ವಚ್ಛಗೊಳಿಸಿಲ್ಲ. ಬಹುತೇಕ ತೆರೆದ ಚರಂಡಿಗಳು ನೀರು ಹಾಗೂ ಕಸದಿಂದ ಕಟ್ಟಿಕೊಂಡು ದುರ್ನಾತ ಬೀರುತ್ತಿವೆ.</p>.<p>ಪಟ್ಟಣದಿಂದ ಮಲ್ಲೇಶಪುರಕ್ಕೆ ಹೋಗುವ ರಸ್ತೆಯ ಸುವರ್ಣಮುಖಿ ನದಿ ಬಳಿ ಕೋಳಿ ಹಾಗೂ ಮಾಂಸದಂಗಡಿ ತ್ಯಾಜ್ಯವನ್ನು ನದಿ ಹರಿಯುವ ಜಾಗದಲ್ಲಿ ಸುರಿಯಲಾಗಿದೆ. ಇದರ ಜೊತೆಯಲ್ಲಿ ಪಟ್ಟಣದ ಕೆಲವು ವಾರ್ಡ್ಗಳ ಚರಂಡಿ ನೀರನ್ನು ಇದೇ ಸ್ಥಳದಲ್ಲಿ ಹರಿದುಬಿಡಲಾಗಿದೆ. ಇದರಿಂದಾಗಿ ಈ ಜಾಗದಲ್ಲಿ ತ್ಯಾಜ್ಯ ಕೊಳೆತ ಸ್ಥಿತಿಯಲ್ಲಿ ಬಹಳ ದಿನಗಳಿಂದ ರಾಶಿ ಬಿದ್ದಿದೆ.</p>.<p>ಇದೇ ಜಾಗದಲ್ಲಿ ಬಹಳದಿನಗಳಿಂದ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಇತರೆ ಕಸಕಡ್ಡಿ ಚರಂಡಿ ನೀರಿನೊಂದಿಗೆ ಕಟ್ಟಿಕೊಂಡು ಕೆಟ್ಟ ವಾಸನೆ ಬೀಉತ್ತಿದೆ.</p>.<p>ತಾಲ್ಲೂಕು ಕಚೇರಿಯ ಸದಾ ಜನಜಂಗುಳಿ ಇರುವ ಕಡೆ ಕಸದ ತೊಟ್ಟಿ ಕಸದಿಂದ ತುಂಬಿ ಬಹಳ ದಿನಗಳೆ ಕಳೆದರೂ ಅದನ್ನು ತೆರವು ಮಾಡಿಲ್ಲ.</p>.<p>ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಹಣ್ಣು, ತರಕಾರಿ, ತಿಂಡಿ ತಿನಿಸು ಅಂಗಡಿಗಳನ್ನು ಮುಚ್ಚುವಂತೆ ನಿರ್ಧಾಕ್ಷಣ್ಯ ಕ್ರಮ ವಹಿಸಲಾಗುತ್ತಿದೆ. ಆದರೆ ತಾಲ್ಲೂಕು ಆಡಳಿತ ಪಟ್ಟಣದ ಸ್ವಚ್ಛತೆ ಬಗ್ಗೆ ಮಾತ್ರ ಅಷ್ಟಾಗಿ ಕಾಳಜಿ ತೋರುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊರಟಗೆರೆ:</strong> ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಕಾರಣ ಎಲ್ಲಡೆ ಸ್ವಚ್ಛತೆ ಹಾಗೂ ಮುಂಜಾಗೃತ ಕ್ರಮ ವಹಿಸಲು ಹರಸಾಹಸ ಪಡುತ್ತಿದ್ದರೂ, ಪಟ್ಟಣದಲ್ಲಿ ಮಾತ್ರ ಇದಾವುದರ ಪರಿವೇ ಇಲ್ಲದೆ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.</p>.<p>ಪಟ್ಟಣದ ಬಹುತೇಕ ಚರಂಡಿಗಳು ಇಲ್ಲಿವರೆಗೂ ಸರಿಯಾಗಿ ಸ್ವಚ್ಛಗೊಳಿಸಿಲ್ಲ. ಬಹುತೇಕ ತೆರೆದ ಚರಂಡಿಗಳು ನೀರು ಹಾಗೂ ಕಸದಿಂದ ಕಟ್ಟಿಕೊಂಡು ದುರ್ನಾತ ಬೀರುತ್ತಿವೆ.</p>.<p>ಪಟ್ಟಣದಿಂದ ಮಲ್ಲೇಶಪುರಕ್ಕೆ ಹೋಗುವ ರಸ್ತೆಯ ಸುವರ್ಣಮುಖಿ ನದಿ ಬಳಿ ಕೋಳಿ ಹಾಗೂ ಮಾಂಸದಂಗಡಿ ತ್ಯಾಜ್ಯವನ್ನು ನದಿ ಹರಿಯುವ ಜಾಗದಲ್ಲಿ ಸುರಿಯಲಾಗಿದೆ. ಇದರ ಜೊತೆಯಲ್ಲಿ ಪಟ್ಟಣದ ಕೆಲವು ವಾರ್ಡ್ಗಳ ಚರಂಡಿ ನೀರನ್ನು ಇದೇ ಸ್ಥಳದಲ್ಲಿ ಹರಿದುಬಿಡಲಾಗಿದೆ. ಇದರಿಂದಾಗಿ ಈ ಜಾಗದಲ್ಲಿ ತ್ಯಾಜ್ಯ ಕೊಳೆತ ಸ್ಥಿತಿಯಲ್ಲಿ ಬಹಳ ದಿನಗಳಿಂದ ರಾಶಿ ಬಿದ್ದಿದೆ.</p>.<p>ಇದೇ ಜಾಗದಲ್ಲಿ ಬಹಳದಿನಗಳಿಂದ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಇತರೆ ಕಸಕಡ್ಡಿ ಚರಂಡಿ ನೀರಿನೊಂದಿಗೆ ಕಟ್ಟಿಕೊಂಡು ಕೆಟ್ಟ ವಾಸನೆ ಬೀಉತ್ತಿದೆ.</p>.<p>ತಾಲ್ಲೂಕು ಕಚೇರಿಯ ಸದಾ ಜನಜಂಗುಳಿ ಇರುವ ಕಡೆ ಕಸದ ತೊಟ್ಟಿ ಕಸದಿಂದ ತುಂಬಿ ಬಹಳ ದಿನಗಳೆ ಕಳೆದರೂ ಅದನ್ನು ತೆರವು ಮಾಡಿಲ್ಲ.</p>.<p>ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಹಣ್ಣು, ತರಕಾರಿ, ತಿಂಡಿ ತಿನಿಸು ಅಂಗಡಿಗಳನ್ನು ಮುಚ್ಚುವಂತೆ ನಿರ್ಧಾಕ್ಷಣ್ಯ ಕ್ರಮ ವಹಿಸಲಾಗುತ್ತಿದೆ. ಆದರೆ ತಾಲ್ಲೂಕು ಆಡಳಿತ ಪಟ್ಟಣದ ಸ್ವಚ್ಛತೆ ಬಗ್ಗೆ ಮಾತ್ರ ಅಷ್ಟಾಗಿ ಕಾಳಜಿ ತೋರುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>