ಎಪಿಎಂಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ‘ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಒತ್ತಡ ತರಬೇಕಿದೆ. ರೈತರೆಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದು, ಕೊಬ್ಬರಿಯನ್ನೇ ನಂಬಿ ಕೂತವರಿಗೆ ನಷ್ಟವಾಗಬಾರದು. ಜತೆಗೆ ನಫೆಡ್ಗೆ ಕೊಬ್ಬರಿ ತಂದ 48 ಗಂಟೆ ಒಳಗಾಗಿ ರೈತರಿಗೆ ಹಣ ಸಂದಾಯ ಆಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.