ಪ್ರಕರಣ ಹಿನ್ನೆಲೆ: ಜಗದೀಶ್ ಎಂಬುವರು ಏ.2ರಂದು ತಮ್ಮ ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯಲು ಪಾಲಿಕೆಗೆ ಬಂದಿದ್ದರು. ಈ ವೇಳೆ ಮಧ್ಯವರ್ತಿ ಸಿದ್ಧಲಿಂಗಯ್ಯ ಎಂಬ ವ್ಯಕ್ತಿ ಅವರಿಗೆ ದಾರಿ ತಪ್ಪಿಸಿದ್ದಾರೆ. 2014ರ ಫೆ.12ರಂದು ಪ್ರಗತಿ ಆಸ್ಪತ್ರೆಯಲ್ಲಿ ಜನನವಾಗಿದ್ದು, ಮಹಾನಗರ ಪಾಲಿಕೆ ದಾಖಲೆಯಲ್ಲೂ ನೋಂದಣಿಯಾಗಿದೆ. ಆದರೆ, ಮಧ್ಯವರ್ತಿ ಸಿದ್ಧಲಿಂಗಯ್ಯ ಈ ಜನನ ದಿನಾಂಕ ಬೇಡ. ನಿಮಗೆ ಬೇಕಾದಂತಹ ಜನನ ದಿನಾಂಕ ಮಾಡಿಸಿಕೊಡುತ್ತೇನೆ ಎಂದು ದಿಕ್ಕು ತಪ್ಪಿಸಿದ್ದಾನೆ.