<p><strong>ತುಮಕೂರು: </strong>ಮಹಾನಗರ ಪಾಲಿಕೆಗೆ ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಬಂದ ವ್ಯಕ್ತಿಗೆ ದಿಕ್ಕು ತಪ್ಪಿಸಿ ವಂಚನೆ ಮಾಡಿದ ಸಿದ್ಧಲಿಂಗಯ್ಯ ಎಂಬ ಮಧ್ಯವರ್ತಿ ವಿರುದ್ಧ ಮಹಾನಗರ ಪಾಲಿಕೆಯು ತಿಲಕ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<p class="Subhead">ಪ್ರಕರಣ ಹಿನ್ನೆಲೆ: ಜಗದೀಶ್ ಎಂಬುವರು ಏ.2ರಂದು ತಮ್ಮ ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯಲು ಪಾಲಿಕೆಗೆ ಬಂದಿದ್ದರು. ಈ ವೇಳೆ ಮಧ್ಯವರ್ತಿ ಸಿದ್ಧಲಿಂಗಯ್ಯ ಎಂಬ ವ್ಯಕ್ತಿ ಅವರಿಗೆ ದಾರಿ ತಪ್ಪಿಸಿದ್ದಾರೆ. 2014ರ ಫೆ.12ರಂದು ಪ್ರಗತಿ ಆಸ್ಪತ್ರೆಯಲ್ಲಿ ಜನನವಾಗಿದ್ದು, ಮಹಾನಗರ ಪಾಲಿಕೆ ದಾಖಲೆಯಲ್ಲೂ ನೋಂದಣಿಯಾಗಿದೆ. ಆದರೆ, ಮಧ್ಯವರ್ತಿ ಸಿದ್ಧಲಿಂಗಯ್ಯ ಈ ಜನನ ದಿನಾಂಕ ಬೇಡ. ನಿಮಗೆ ಬೇಕಾದಂತಹ ಜನನ ದಿನಾಂಕ ಮಾಡಿಸಿಕೊಡುತ್ತೇನೆ ಎಂದು ದಿಕ್ಕು ತಪ್ಪಿಸಿದ್ದಾನೆ.</p>.<p>ಅಲ್ಲದೇ 2014ರ ಆ.1ರಂದು ಮನೆಯಲ್ಲಿಯೇ ಜನನವಾಗಿದ್ದು, ನೋಂದಣಿ ಮಾಡಸಿರಲಿಲ್ಲ. ಹೀಗಾಗಿ ಜನನ ಪ್ರಮಾಣ ಪತ್ರ ಇಲ್ಲ. ಈಗ ಜನನ ಪ್ರಮಾಣ ಪ್ರಮಾಣ ಪತ್ರ ದೊರಕಿಸಬೇಕು ಎಂಬ ಸುಳ್ಳು ಹೇಳಿ ಅರ್ಜಿಯನ್ನೂ ತಾನೇ ಬರೆದುಕೊಟ್ಟು ಅರ್ಜಿದಾರರಿಂದ ಸಹಿ ಹಾಕಿಸಿದ್ದ.</p>.<p>ಅರ್ಜಿ ಕುರಿತು ಅನುಮಾನಗೊಂಡ ಮಹಾನಗರ ಪಾಲಿಕೆಯ ಜನನ ವಿಭಾಗದ ಅಧಿಕಾರಿಗಳು ಅರ್ಜಿದಾರ ಜಗದೀಶ್ ಅವರನ್ನು ಕರೆಸಿ ಕೇಳಿದಾಗ ಸಿದ್ಧಲಿಂಗಯ್ಯ ಎಂಬುವವರು ನಮಗೆ ತಪ್ಪು ಮಾಹಿತಿ ನೀಡಿದ್ದರಿಂದ ಪಾಲಿಕೆ ಕಚೇರಿಗೆ ಜನನ ಪ್ರಮಾಣ ಪತ್ರ ಕೋರಿಕೆ ಪತ್ರ ಸಲ್ಲಿಸಿದ್ದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ.</p>.<p>ಈ ಎಲ್ಲ ಹಿನ್ನೆಲೆಯಲ್ಲಿ ಪಾಲಿಕೆಯು ಮಧ್ಯವರ್ತಿ ಸಿದ್ಧಲಿಂಗಯ್ಯನ ವಿರುದ್ಧ ತಿಲಕ್ ಪಾರ್ಕ್ ಠಾಣೆಗೆ ದೂರು ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಮಹಾನಗರ ಪಾಲಿಕೆಗೆ ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಬಂದ ವ್ಯಕ್ತಿಗೆ ದಿಕ್ಕು ತಪ್ಪಿಸಿ ವಂಚನೆ ಮಾಡಿದ ಸಿದ್ಧಲಿಂಗಯ್ಯ ಎಂಬ ಮಧ್ಯವರ್ತಿ ವಿರುದ್ಧ ಮಹಾನಗರ ಪಾಲಿಕೆಯು ತಿಲಕ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<p class="Subhead">ಪ್ರಕರಣ ಹಿನ್ನೆಲೆ: ಜಗದೀಶ್ ಎಂಬುವರು ಏ.2ರಂದು ತಮ್ಮ ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯಲು ಪಾಲಿಕೆಗೆ ಬಂದಿದ್ದರು. ಈ ವೇಳೆ ಮಧ್ಯವರ್ತಿ ಸಿದ್ಧಲಿಂಗಯ್ಯ ಎಂಬ ವ್ಯಕ್ತಿ ಅವರಿಗೆ ದಾರಿ ತಪ್ಪಿಸಿದ್ದಾರೆ. 2014ರ ಫೆ.12ರಂದು ಪ್ರಗತಿ ಆಸ್ಪತ್ರೆಯಲ್ಲಿ ಜನನವಾಗಿದ್ದು, ಮಹಾನಗರ ಪಾಲಿಕೆ ದಾಖಲೆಯಲ್ಲೂ ನೋಂದಣಿಯಾಗಿದೆ. ಆದರೆ, ಮಧ್ಯವರ್ತಿ ಸಿದ್ಧಲಿಂಗಯ್ಯ ಈ ಜನನ ದಿನಾಂಕ ಬೇಡ. ನಿಮಗೆ ಬೇಕಾದಂತಹ ಜನನ ದಿನಾಂಕ ಮಾಡಿಸಿಕೊಡುತ್ತೇನೆ ಎಂದು ದಿಕ್ಕು ತಪ್ಪಿಸಿದ್ದಾನೆ.</p>.<p>ಅಲ್ಲದೇ 2014ರ ಆ.1ರಂದು ಮನೆಯಲ್ಲಿಯೇ ಜನನವಾಗಿದ್ದು, ನೋಂದಣಿ ಮಾಡಸಿರಲಿಲ್ಲ. ಹೀಗಾಗಿ ಜನನ ಪ್ರಮಾಣ ಪತ್ರ ಇಲ್ಲ. ಈಗ ಜನನ ಪ್ರಮಾಣ ಪ್ರಮಾಣ ಪತ್ರ ದೊರಕಿಸಬೇಕು ಎಂಬ ಸುಳ್ಳು ಹೇಳಿ ಅರ್ಜಿಯನ್ನೂ ತಾನೇ ಬರೆದುಕೊಟ್ಟು ಅರ್ಜಿದಾರರಿಂದ ಸಹಿ ಹಾಕಿಸಿದ್ದ.</p>.<p>ಅರ್ಜಿ ಕುರಿತು ಅನುಮಾನಗೊಂಡ ಮಹಾನಗರ ಪಾಲಿಕೆಯ ಜನನ ವಿಭಾಗದ ಅಧಿಕಾರಿಗಳು ಅರ್ಜಿದಾರ ಜಗದೀಶ್ ಅವರನ್ನು ಕರೆಸಿ ಕೇಳಿದಾಗ ಸಿದ್ಧಲಿಂಗಯ್ಯ ಎಂಬುವವರು ನಮಗೆ ತಪ್ಪು ಮಾಹಿತಿ ನೀಡಿದ್ದರಿಂದ ಪಾಲಿಕೆ ಕಚೇರಿಗೆ ಜನನ ಪ್ರಮಾಣ ಪತ್ರ ಕೋರಿಕೆ ಪತ್ರ ಸಲ್ಲಿಸಿದ್ದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ.</p>.<p>ಈ ಎಲ್ಲ ಹಿನ್ನೆಲೆಯಲ್ಲಿ ಪಾಲಿಕೆಯು ಮಧ್ಯವರ್ತಿ ಸಿದ್ಧಲಿಂಗಯ್ಯನ ವಿರುದ್ಧ ತಿಲಕ್ ಪಾರ್ಕ್ ಠಾಣೆಗೆ ದೂರು ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>