<p><strong>ಕುಣಿಗಲ್:</strong> ಪಟ್ಟಣದ ಹೃದಯ ಭಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 1977ರಲ್ಲಿ 9 ಗುಂಟೆ ಜಮೀನು 20 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದೆ. ಆದರೆ ಸರ್ಕಾರಿ ನಿಯಮ ಪಾಲಿಸಿ, ಜಮೀನು ವಶಕ್ಕೆ ಪಡೆದು ಭವನ ನಿರ್ಮಾಣಕ್ಕೆ ಮುಂದಾಗಿಲ್ಲ. </p>.<p>ಕಂದಾಯ ಇಲಾಖೆ ದಾಖಲೆಗಳ ಪ್ರಕಾರ, ಕುಣಿಗಲ್ ಕಸಬಾ ಗ್ರಾಮದ ಸರ್ವೆ ನಂ 110ರ 9 ಗುಂಟೆ ಸರ್ಕಾರಿ ಬ ಖರಾಬು ಜಮೀನನ್ನು ಜಿಲ್ಲಾಧಿಕಾರಿ 1977ರಲ್ಲಿ ವಾರ್ಷಿಕ ₹80 ಗುತ್ತಿಗೆ ದರ ವಿಧಿಸಿ, 20 ವರ್ಷಕ್ಕೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ತಾಲ್ಲೂಕು ಕಾಂಗ್ರೆಸ್ ಸಮಿತಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಷರತ್ತು ವಿಧಿಸಿ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿದ್ದರು.</p>.<p>ಆದರೆ ಕಾಂಗ್ರೆಸ್ ಸಮಿತಿ ಜಮೀನು ವಶಕ್ಕೆ ಪಡೆದು ಕಾಲಕಾಲಕ್ಕೆ ನಿಗದಿತ ವಾರ್ಷಿಕ ಗುತ್ತಿಗೆ ದರವನ್ನು ಸರ್ಕಾರಕ್ಕೆ ಪಾವತಿಸದ ಕಾರಣ ಪಹಣಿ ಕಾಲಂ 11ರಲ್ಲಿ ನಮೂದು ಮಾಡಿಲ್ಲ.</p>.<p>20 ವರ್ಷದ ಗುತ್ತಿಗೆ ಅವಧಿ 1997ಕ್ಕೆ ಮುಕ್ತಾಯವಾಗಿದ್ದರೂ, ಕಾಂಗ್ರೆಸ್ ಸಮಿತಿಯವರು ಗುತ್ತಿಗೆಯನ್ನು ಮುಕ್ತಾಯಗೊಳಿಸುವ ಬಗ್ಗೆಯಾಗಲಿ, ನವೀಕರಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಜಮೀನನ್ನು ನೀಡಿದ ಉದ್ದೇಶಕ್ಕೆ ಬಳಸಿಕೊಂಡಿಲ್ಲ.</p>.<p>2023 ರಲ್ಲಿ ಶಾಸಕ ಡಾ.ರಂಗನಾಥ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡರವರುಗಳು, ಗುತ್ತಿಗೆ ಆದೇಶವನ್ನು ನವೀಕರಿಸಿಕೊಡಲು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ..</p>.<p>ಶಾಸಕರ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು, ಗುತ್ತಿಗೆ ನೀಡಿದ ಅವಧಿಯಿಂದ ಈವರೆಗೂ ಗುತ್ತಿಗೆದರದ ಎರಡು ಪಟ್ಟು ಮೊತ್ತ ಮತ್ತು ದಂಡ ಭರಿಸಿಕೊಂಡು ನಂತರ ಪ್ರಚಲಿತ ಮೌಲ್ಯ ಆಧರಿಸಿ ನಿಯಮಗಳ ಪ್ರಕಾರ ಕಲ್ಯಾಣ ಚಟುವಟಿಕೆಗೆ ನೀಡಲು ಪ್ರಸ್ತಾವನೆಯಲ್ಲಿ ಸೂಚನೆ ನೀಡಿದ್ದಾರೆ.</p>.<p>ತಾಲ್ಲೂಕಿನಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಸುಭದ್ರವಾಗಿದ್ದು, ಹುಚ್ಚಮಾಸ್ತಿಗೌಡ, ಅಂದಾನಯ್ಯ, ಎಸ್.ಪಿ ಮುದ್ದಹನುಮೇಗೌಡ, ವೈ.ಕೆ.ರಾಮಯ್ಯ ಮತ್ತು ಬಿ.ಬಿ.ರಾಮಸ್ವಾಮಿ ಗೌಡ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಭವನಕ್ಕೆ ಮಂಜೂರಾದ ಜಮೀನನ್ನು ನಿಯಮಾವಳಿಗಳ ಪ್ರಕಾಋ ವಶಕ್ಕೆ ಪಡೆದು ಭವನ ನಿರ್ಮಾಣಕ್ಕೆ ಗಮನಹರಿಸದಿರುವುದರಿಂದ ಆ ಪ್ರದೇಶದಲ್ಲಿ ಹತ್ತು ಹಲವಾರು ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.</p>.<p>ಕಾಂಗ್ರೆಸ್ ಪಕ್ಷದವರು ಭವನ ಕಟ್ಟಲು ಮುಂದಾಗುತ್ತಿದ್ದು, ದಲಿತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ದಲಿತ ಜಾಗೃತಿ ಸಮಿತಿಯ ದಲಿತ್ ನಾರಾಯಣ್ ಮನವಿ ಮಾಡಿದ್ದಾರೆ.</p>.<p>ಶಾಸಕ ಡಾ.ರಂಗನಾಥ್, 1977 ರಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಜಮೀನು ಮಂಜೂರಾಗಿದೆ, ಸರ್ಕಾರದ ನಿಯಮಗಳನ್ನು ಪಾಲಿಸಿ ಜಮೀನು ವಶಕ್ಕೆ ಪಡೆದು ಕಚೇರಿ ನಿರ್ಮಾಣಕ್ಕೆ ಮುಂದಾಗದ ಕಾರಣ ಕಾನೂನು ತೊಡಕುಗಳಿದ್ದು, ಎಲ್ಲವನ್ನು ನಿವಾರಿಸಿ ತಮ್ಮ ಅಧಿಕಾರಾವಧಿಯಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ಪಟ್ಟಣದ ಹೃದಯ ಭಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 1977ರಲ್ಲಿ 9 ಗುಂಟೆ ಜಮೀನು 20 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದೆ. ಆದರೆ ಸರ್ಕಾರಿ ನಿಯಮ ಪಾಲಿಸಿ, ಜಮೀನು ವಶಕ್ಕೆ ಪಡೆದು ಭವನ ನಿರ್ಮಾಣಕ್ಕೆ ಮುಂದಾಗಿಲ್ಲ. </p>.<p>ಕಂದಾಯ ಇಲಾಖೆ ದಾಖಲೆಗಳ ಪ್ರಕಾರ, ಕುಣಿಗಲ್ ಕಸಬಾ ಗ್ರಾಮದ ಸರ್ವೆ ನಂ 110ರ 9 ಗುಂಟೆ ಸರ್ಕಾರಿ ಬ ಖರಾಬು ಜಮೀನನ್ನು ಜಿಲ್ಲಾಧಿಕಾರಿ 1977ರಲ್ಲಿ ವಾರ್ಷಿಕ ₹80 ಗುತ್ತಿಗೆ ದರ ವಿಧಿಸಿ, 20 ವರ್ಷಕ್ಕೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ತಾಲ್ಲೂಕು ಕಾಂಗ್ರೆಸ್ ಸಮಿತಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಷರತ್ತು ವಿಧಿಸಿ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿದ್ದರು.</p>.<p>ಆದರೆ ಕಾಂಗ್ರೆಸ್ ಸಮಿತಿ ಜಮೀನು ವಶಕ್ಕೆ ಪಡೆದು ಕಾಲಕಾಲಕ್ಕೆ ನಿಗದಿತ ವಾರ್ಷಿಕ ಗುತ್ತಿಗೆ ದರವನ್ನು ಸರ್ಕಾರಕ್ಕೆ ಪಾವತಿಸದ ಕಾರಣ ಪಹಣಿ ಕಾಲಂ 11ರಲ್ಲಿ ನಮೂದು ಮಾಡಿಲ್ಲ.</p>.<p>20 ವರ್ಷದ ಗುತ್ತಿಗೆ ಅವಧಿ 1997ಕ್ಕೆ ಮುಕ್ತಾಯವಾಗಿದ್ದರೂ, ಕಾಂಗ್ರೆಸ್ ಸಮಿತಿಯವರು ಗುತ್ತಿಗೆಯನ್ನು ಮುಕ್ತಾಯಗೊಳಿಸುವ ಬಗ್ಗೆಯಾಗಲಿ, ನವೀಕರಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಜಮೀನನ್ನು ನೀಡಿದ ಉದ್ದೇಶಕ್ಕೆ ಬಳಸಿಕೊಂಡಿಲ್ಲ.</p>.<p>2023 ರಲ್ಲಿ ಶಾಸಕ ಡಾ.ರಂಗನಾಥ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡರವರುಗಳು, ಗುತ್ತಿಗೆ ಆದೇಶವನ್ನು ನವೀಕರಿಸಿಕೊಡಲು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ..</p>.<p>ಶಾಸಕರ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು, ಗುತ್ತಿಗೆ ನೀಡಿದ ಅವಧಿಯಿಂದ ಈವರೆಗೂ ಗುತ್ತಿಗೆದರದ ಎರಡು ಪಟ್ಟು ಮೊತ್ತ ಮತ್ತು ದಂಡ ಭರಿಸಿಕೊಂಡು ನಂತರ ಪ್ರಚಲಿತ ಮೌಲ್ಯ ಆಧರಿಸಿ ನಿಯಮಗಳ ಪ್ರಕಾರ ಕಲ್ಯಾಣ ಚಟುವಟಿಕೆಗೆ ನೀಡಲು ಪ್ರಸ್ತಾವನೆಯಲ್ಲಿ ಸೂಚನೆ ನೀಡಿದ್ದಾರೆ.</p>.<p>ತಾಲ್ಲೂಕಿನಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಸುಭದ್ರವಾಗಿದ್ದು, ಹುಚ್ಚಮಾಸ್ತಿಗೌಡ, ಅಂದಾನಯ್ಯ, ಎಸ್.ಪಿ ಮುದ್ದಹನುಮೇಗೌಡ, ವೈ.ಕೆ.ರಾಮಯ್ಯ ಮತ್ತು ಬಿ.ಬಿ.ರಾಮಸ್ವಾಮಿ ಗೌಡ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಭವನಕ್ಕೆ ಮಂಜೂರಾದ ಜಮೀನನ್ನು ನಿಯಮಾವಳಿಗಳ ಪ್ರಕಾಋ ವಶಕ್ಕೆ ಪಡೆದು ಭವನ ನಿರ್ಮಾಣಕ್ಕೆ ಗಮನಹರಿಸದಿರುವುದರಿಂದ ಆ ಪ್ರದೇಶದಲ್ಲಿ ಹತ್ತು ಹಲವಾರು ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.</p>.<p>ಕಾಂಗ್ರೆಸ್ ಪಕ್ಷದವರು ಭವನ ಕಟ್ಟಲು ಮುಂದಾಗುತ್ತಿದ್ದು, ದಲಿತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ದಲಿತ ಜಾಗೃತಿ ಸಮಿತಿಯ ದಲಿತ್ ನಾರಾಯಣ್ ಮನವಿ ಮಾಡಿದ್ದಾರೆ.</p>.<p>ಶಾಸಕ ಡಾ.ರಂಗನಾಥ್, 1977 ರಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಜಮೀನು ಮಂಜೂರಾಗಿದೆ, ಸರ್ಕಾರದ ನಿಯಮಗಳನ್ನು ಪಾಲಿಸಿ ಜಮೀನು ವಶಕ್ಕೆ ಪಡೆದು ಕಚೇರಿ ನಿರ್ಮಾಣಕ್ಕೆ ಮುಂದಾಗದ ಕಾರಣ ಕಾನೂನು ತೊಡಕುಗಳಿದ್ದು, ಎಲ್ಲವನ್ನು ನಿವಾರಿಸಿ ತಮ್ಮ ಅಧಿಕಾರಾವಧಿಯಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>