ಅವೈಜ್ಞಾನಿಕ ಕಾಮಗಾರಿ ಮಾಡಿದ್ದು, ಚರಂಡಿ ತುಂಬಿ ಹರಿದರೆ ಕಲುಷಿತ ನೀರು ಸೀದಾ ಸ್ಮಶಾನಕ್ಕೆ ಹರಿಯುತ್ತವೆ. ಒಂದು ಹೆಜ್ಜೆ ಮುಂದಿಡಲು ಆಗದ ರೀತಿಯಲ್ಲಿ ನೀರು ತುಂಬಿಕೊಂಡಿವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವುದನ್ನೇ ಮರೆತಿದ್ದಾರೆ. ಹಲವರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರವಿಕುಮಾರ್, ನರಸಿಂಹಮೂರ್ತಿ ಗೌಡ, ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದರು.