ತಿಪಾಪುರ ಗ್ರಾಮ ಮೂಲಸೌಲಭ್ಯವಿಲ್ಲದೇ ಇರುವುದರಿಂದ ಕೆಲ ಪೋಷಕರು ಧೈರ್ಯ ಮಾಡಿ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಐಡಿಹಳ್ಳಿ ಅಥವಾ ಮಧುಗಿರಿಗೆ ಕಳುಹಿಸುತ್ತಾರೆ. ಕೆಲವು ಪೋಷಕರು ಸಮಸ್ಯೆಗಳನ್ನು ಅರಿತು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಮೂಲಸೌಲಭ್ಯಗಳೇ ಸಿಗಲಿಲ್ಲವೆಂದರೆ ಉನ್ನತ ವಿದ್ಯಾಭ್ಯಾಸ ಮಾಡುವುದು ಹೇಗೆ ಎಂದು ವಿದ್ಯಾರ್ಥಿಗಳಾದ ಸುಮಾ, ಗಗನ, ಎನ್. ನಂದಿನಿ, ಎಚ್.ಗಂಗೋತ್ರಿ, ಶಿಲ್ಪ, ಅಂಕಿತಾ, ಪಲ್ಲವಿ, ನವೀನ್ ಕುಮಾರ್, ಅಖಿಲೇಶ್ ಹಾಗೂ ಆಶಾ ಕಾರ್ಯಕರ್ತೆ ಮಂಜುಳಾಪ್ರಶ್ನಿಸಿದರು.