ಹಿನ್ನೆಲೆ: ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನವನ್ನು ಕುರುಬ ಸಮಾಜದ ಸೋಮೇಲಿಂಗಪ್ಪ, ಚೌಡಪ್ಪ, ಮರಿಯಣ್ಣ ಎಂಬುವರು 1886ರಲ್ಲಿ ನಿರ್ಮಿಸಿರುವುದು ಗೆಜೆಟ್ನಲ್ಲಿ ದಾಖಲಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗಾಗಿ ತಮಗೆ ಸೇರಿದ 250 ಎಕರೆ ಜಮೀನನ್ನು ದೇವರ ಹೆಸರಿನಲ್ಲಿರಿಸಲು ಉದ್ದೇಶಿಸಿದ್ದರು. ದೇಗುಲದ ವಿಧಿವಿಧಾನಗಳನ್ನು ನೋಡಿಕೊಳ್ಳಲು ಸ್ವಾಮಿ ಅರ್ಥದಲ್ಲಿ ನೇಮಕ ಮಾಡಿಕೊಂಡು ಬರಲಾಗಿದ್ದು, ಈವರೆಗೂ ಆರು ಮಂದಿ ನೇಮಕ ಮಾಡಲಾಗಿದೆ. ಕೊನೆಯದಾಗಿ ನೇಮಕಗೊಂಡ ಗುರುಕುಮಾರ ಅವಧೂತ ಸ್ವಾಮಿ ಈ ಜಮೀನು ಕಬಳಿಸಲು ಯತ್ನಿಸಿದ್ದರು ಎಂದು ಆರೋಪಿಸಿದರು.