<p><strong>ಕುಣಿಗಲ್: </strong>‘ಕುರುಕ್ಷೇತ್ರದ ಹಾರ್ಮೋನಿಯಂ ಮೇಷ್ಟ್ರು’ ಎಂದೇ ಖ್ಯಾತಿಗಳಿಸಿರುವವರು ತಾಲ್ಲೂಕಿನ ಹುಲಿಯೂರುದುರ್ಗ ಶೃಂಗಾರಸಾಗರದ ಎಂ.ಎಸ್. ಜಗದೀಶ್. 29ನೇ ವಯಸ್ಸಿಗೆ 129 ನಾಟಕಗಳಿಗೆ ಹಾರ್ಮೋನಿಯಂ ನುಡಿಸಿ, ರಂಗ ಸಂಗೀತಕ್ಕೆ ಜೀವ ತುಂಬಿದ್ದಾರೆ.</p>.<p>16ನೇ ವಯಸ್ಸಿನಿಂದಲೇ ಸೋದರ ಮಾವ ಎಸ್.ಆರ್.ಪುಟ್ಟರಾಜು ಗರಡಿಯಲ್ಲಿ ಪಳಗಿ 12 ವರ್ಷ ನಿರಂತರವಾಗಿ ಕುರುಕ್ಷೇತ್ರ, ರಾಮಾಯಣ, ಮಹಾಭಾರತ ನಾಟಕಗಳನ್ನು ಕಲಿಸುತ್ತಲೇ ರಂಗಭೂಮಿ ಕಲಾವಿದರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.</p>.<p>ಜಗದೀಶ್, ರಂಗಭೂಮಿಗೆ ಅನೇಕ ಕಲಾವಿದರನ್ನು ಪರಿಚಯಿಸಿ ಅವರಲ್ಲಿನ ಅಭಿನಯಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.</p>.<p>ಜಗದೀಶ್ ಪ್ರೌಢ ಶಿಕ್ಷಣದ ನಂತರ ಹಾರ್ಮೋನಿಯಂ ತರಬೇತಿ ಪಡೆದರು. ನಾಟಕ ಅಭಿನಯ, ನಿರ್ದೇಶನ, ಸಂಭಾಷಣೆ ಮತ್ತು ಕಂದಪದ್ಯಗಳ ಗಾಯನದಲ್ಲೂ ಪರಿಣತಿ ಗಳಿಸಿದ್ದಾರೆ. ಮೊದಲ ಬಾರಿಗೆ ಗೊಲ್ಲರ ಹಟ್ಟಿಯ ಕೃಷ್ಣ ಕಲಾಭಿಮಾನಿಗಳ ಸಂಘದ ಆಶ್ರಯದಲ್ಲಿ ಕುರುಕೇತ್ರ ನಾಟಕ ನಿರ್ದೇಶಿಸಿದ್ದಾರೆ.</p>.<p>ಕೃಷ್ಣ, ಅಭಿಮನ್ಯು ಮತ್ತು ಧರ್ಮರಾಯನ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ನಟನೆಯಲ್ಲೂ ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದಾರೆ. ಕುಣಿಗಲ್, ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರಿನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಹುಲಿಯೂರುದುರ್ಗ ಮಾರುತಿ ಕಲಾಭಿಮಾನಿಗಳ ಸಂಘ ಇವರಿಗೆ ‘ರಂಗತಿಲಕ’ ಎಂಬ ಬಿರುದು ನೀಡಿ ಸನ್ಮಾನಿಸಿದೆ.</p>.<p>***</p>.<p><strong>25ರಂದು ಪೊಲೀಸರಿಂದ ಕುರುಕ್ಷೇತ್ರ</strong></p>.<p>ಕುಣಿಗಲ್ ತಾಲ್ಲೂಕಿನ ಪೊಲೀಸರು ಡಿ.25ರಂದು ‘ಕುರುಕ್ಷೇತ್ರ’ ನಾಟಕ ಪ್ರದರ್ಶಿಸುವರು. ಜಗದೀಶ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಕಾನೂನು, ಶಾಂತಿ, ಸುವ್ಯವಸ್ಥೆ, ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ರಂಗಭೂಮಿಯ ಕಂದಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು, ಪಾತ್ರಗಳಿಗೆ ತಕ್ಕ ಭಾವಾಭಿನಯವನ್ನು ಕಲಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್: </strong>‘ಕುರುಕ್ಷೇತ್ರದ ಹಾರ್ಮೋನಿಯಂ ಮೇಷ್ಟ್ರು’ ಎಂದೇ ಖ್ಯಾತಿಗಳಿಸಿರುವವರು ತಾಲ್ಲೂಕಿನ ಹುಲಿಯೂರುದುರ್ಗ ಶೃಂಗಾರಸಾಗರದ ಎಂ.ಎಸ್. ಜಗದೀಶ್. 29ನೇ ವಯಸ್ಸಿಗೆ 129 ನಾಟಕಗಳಿಗೆ ಹಾರ್ಮೋನಿಯಂ ನುಡಿಸಿ, ರಂಗ ಸಂಗೀತಕ್ಕೆ ಜೀವ ತುಂಬಿದ್ದಾರೆ.</p>.<p>16ನೇ ವಯಸ್ಸಿನಿಂದಲೇ ಸೋದರ ಮಾವ ಎಸ್.ಆರ್.ಪುಟ್ಟರಾಜು ಗರಡಿಯಲ್ಲಿ ಪಳಗಿ 12 ವರ್ಷ ನಿರಂತರವಾಗಿ ಕುರುಕ್ಷೇತ್ರ, ರಾಮಾಯಣ, ಮಹಾಭಾರತ ನಾಟಕಗಳನ್ನು ಕಲಿಸುತ್ತಲೇ ರಂಗಭೂಮಿ ಕಲಾವಿದರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.</p>.<p>ಜಗದೀಶ್, ರಂಗಭೂಮಿಗೆ ಅನೇಕ ಕಲಾವಿದರನ್ನು ಪರಿಚಯಿಸಿ ಅವರಲ್ಲಿನ ಅಭಿನಯಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.</p>.<p>ಜಗದೀಶ್ ಪ್ರೌಢ ಶಿಕ್ಷಣದ ನಂತರ ಹಾರ್ಮೋನಿಯಂ ತರಬೇತಿ ಪಡೆದರು. ನಾಟಕ ಅಭಿನಯ, ನಿರ್ದೇಶನ, ಸಂಭಾಷಣೆ ಮತ್ತು ಕಂದಪದ್ಯಗಳ ಗಾಯನದಲ್ಲೂ ಪರಿಣತಿ ಗಳಿಸಿದ್ದಾರೆ. ಮೊದಲ ಬಾರಿಗೆ ಗೊಲ್ಲರ ಹಟ್ಟಿಯ ಕೃಷ್ಣ ಕಲಾಭಿಮಾನಿಗಳ ಸಂಘದ ಆಶ್ರಯದಲ್ಲಿ ಕುರುಕೇತ್ರ ನಾಟಕ ನಿರ್ದೇಶಿಸಿದ್ದಾರೆ.</p>.<p>ಕೃಷ್ಣ, ಅಭಿಮನ್ಯು ಮತ್ತು ಧರ್ಮರಾಯನ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ನಟನೆಯಲ್ಲೂ ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದಾರೆ. ಕುಣಿಗಲ್, ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರಿನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಹುಲಿಯೂರುದುರ್ಗ ಮಾರುತಿ ಕಲಾಭಿಮಾನಿಗಳ ಸಂಘ ಇವರಿಗೆ ‘ರಂಗತಿಲಕ’ ಎಂಬ ಬಿರುದು ನೀಡಿ ಸನ್ಮಾನಿಸಿದೆ.</p>.<p>***</p>.<p><strong>25ರಂದು ಪೊಲೀಸರಿಂದ ಕುರುಕ್ಷೇತ್ರ</strong></p>.<p>ಕುಣಿಗಲ್ ತಾಲ್ಲೂಕಿನ ಪೊಲೀಸರು ಡಿ.25ರಂದು ‘ಕುರುಕ್ಷೇತ್ರ’ ನಾಟಕ ಪ್ರದರ್ಶಿಸುವರು. ಜಗದೀಶ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಕಾನೂನು, ಶಾಂತಿ, ಸುವ್ಯವಸ್ಥೆ, ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ರಂಗಭೂಮಿಯ ಕಂದಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು, ಪಾತ್ರಗಳಿಗೆ ತಕ್ಕ ಭಾವಾಭಿನಯವನ್ನು ಕಲಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>