ತುಮಕೂರು: ದೇವರಾಯನದುರ್ಗದಲ್ಲಿನ ಭೋಗ ನರಸಿಂಹಸ್ವಾಮಿ ದೇವಸ್ಥಾನದ ಬಲಭಾಗದ ಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು.
ಬೆಟ್ಟದಲ್ಲಿ ಬೆಳೆದಿದ್ದ ಹುಲ್ಲು ಈಗ ಒಣಗಿದೆ. ಹಾಗಾಗಿ ಬೆಂಕಿಜ್ವಾಲೆ ತ್ವರಿತವಾಗಿ ಹಬ್ಬುತ್ತಿತ್ತು. ಬಂಡೆಗಳಿಂದಾಗಿ ಬೆಂಕಿ ಹೆಚ್ಚಿನ ಪ್ರದೇಶಗಳಿಗೆ ಹರಡಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
ಬೆಂಕಿಯ ಧಗೆಗೆ 1 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿನ ಹುಲ್ಲು ಸುಟ್ಟಿದೆ. ಗಿಡಗಳಿಗೂ ತಾಪ ತಗಲಿದ್ದರಿಂದ ಅವುಗಳೂ ಬಾಡಿದಂತಾಗಿವೆ.
ಬಿಸಿಲಿನ ಜಳ ನಿತ್ಯ ಹೆಚ್ಚುತ್ತಿರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದಲ್ಲಿನ ಕಾಣಿಸಿಕೊಳ್ಳುವ ಬೆಂಕಿಯತ್ತ ಕಣ್ಣಿಟ್ಟಿರಬೇಕು. ಆ ಮೂಲಕ ಪರಿಸರವನ್ನು ಉಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.