ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಯನದುರ್ಗದಲ್ಲಿ ಬೆಂಕಿ: ಬಾಡಿದ ಗಿಡಗಳು

Last Updated 16 ಫೆಬ್ರುವರಿ 2020, 9:08 IST
ಅಕ್ಷರ ಗಾತ್ರ

ತುಮಕೂರು: ದೇವರಾಯನದುರ್ಗದಲ್ಲಿನ ಭೋಗ ನರಸಿಂಹಸ್ವಾಮಿ ದೇವಸ್ಥಾನದ ಬಲಭಾಗದ ಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು.

ಬೆಟ್ಟದಲ್ಲಿ ಬೆಳೆದಿದ್ದ ಹುಲ್ಲು ಈಗ ಒಣಗಿದೆ. ಹಾಗಾಗಿ ಬೆಂಕಿಜ್ವಾಲೆ ತ್ವರಿತವಾಗಿ ಹಬ್ಬುತ್ತಿತ್ತು. ಬಂಡೆಗಳಿಂದಾಗಿ ಬೆಂಕಿ ಹೆಚ್ಚಿನ ಪ್ರದೇಶಗಳಿಗೆ ಹರಡಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಬೆಂಕಿಯ ಧಗೆಗೆ 1 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿನ ಹುಲ್ಲು ಸುಟ್ಟಿದೆ. ಗಿಡಗಳಿಗೂ ತಾಪ ತಗಲಿದ್ದರಿಂದ ಅವುಗಳೂ ಬಾಡಿದಂತಾಗಿವೆ.

ಬಿಸಿಲಿನ ಜಳ ನಿತ್ಯ ಹೆಚ್ಚುತ್ತಿರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದಲ್ಲಿನ ಕಾಣಿಸಿಕೊಳ್ಳುವ ಬೆಂಕಿಯತ್ತ ಕಣ್ಣಿಟ್ಟಿರಬೇಕು. ಆ ಮೂಲಕ ಪರಿಸರವನ್ನು ಉಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT