ಹುಲಿಯೂರುದುರ್ಗ ಹೋಬಳಿಯ ದೊಡ್ಡಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು, ‘ಸೊಸೆ ಕುಸುಮಾ ತಂದೆ ಹೆಸರಿನಲ್ಲಿ ರಾಜಕೀಯ ಪ್ರವೇಶ ಮಾಡಲಿ. ಡಿ.ಕೆ. ರವಿ ಪತ್ನಿಯಾಗಿ ರಾಜಕೀಯ ಮಾಡುವ ಅರ್ಹತೆ ಅವರಿಗಿಲ್ಲ. ರವಿ ಸತ್ತ ದಿನ ಬಂದು ಮಣ್ಣು ಹಾಕಿ ಹೋದವಳು,ಇಲ್ಲಿಯವರೆಗೂ ಬಂದು ನೋಡಿಲ್ಲ. ಅಂದೆ ಡಿ.ಕೆ.ರವಿಯೊಂದಿಗಿನ ಸಂಬಂಧ ಆಕೆಗೆ ಕಡಿದು ಹೋಗಿದೆ’ ಎಂದರು.