ಪಟ್ಟನಾಯಕನಹಳ್ಳಿ: ಶಿರಾ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗ ಮಧ್ಯೆ ಕ್ಷೌರಿಕರ ಅಂಗಡಿಗೆ ತೆರಳಿ ಸರ್ಕಾರ ಸವಿತಾ ಸಮಾಜದ ಹಿತರಕ್ಷಣೆಗಾಗಿ ಘೋಷಿಸಿದ್ದ ಹಣ ಬಂದಿದೆಯಾ ಎಂದು ವಿಚಾರಿಸಿದರು.
ಶಿರಾ ತಾಲ್ಲೂಕಿನ ಉಗಣೆಕಟ್ಟೆ ಗ್ರಾಮದಲ್ಲಿ ಕೊರೊನಾ ಸಮಯದಲ್ಲಿ ಸವಿತಾ ಸಮಾಜ, ಕೂಲಿ ಕಾರ್ಮಿಕರಿಗೆ ಸೇರಿದಂತೆ ವಿವಿಧ ಸಮುದಾಯದ ನೆರವಿಗೆ ಸರ್ಕಾರ ಘೋಷಣೆ ಮಾಡಿದ್ದ ನೆರವನ್ನು ತಲುಪಿದೆಯಾ ಎಂದು ಈ ಸಂದರ್ಭದಲ್ಲಿ ಪರಿಶೀಲಿಸಿದರು.