<p><strong>ತುಮಕೂರು</strong>: ಹವಾಮಾನ ವೈಪರೀತ್ಯಕ್ಕೆ ನಮ್ಮ ಬೇಜವಾಬ್ದಾರಿ ನಡೆ ಕಾರಣ. ನಾವು ಪ್ರಕೃತಿ ಜತೆಗೆ ಜೀವಿಸುವುದು ಕಲಿಯಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.</p>.<p>ನಗರದಲ್ಲಿ ಶನಿವಾರ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘವು ವಿವೇಕಾನಂದ ವಿದ್ಯಾಸಂಸ್ಥೆ, ರೋಟರಿ ತುಮಕೂರು, ಅರಣ್ಯ ಇಲಾಖೆ, ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮುಖಂಡ ಟಿ.ಆರ್.ಸದಾಶಿವಯ್ಯ, ‘ಬಡಾವಣೆಯ ಸಂಘ ಇತರರಿಗೆ ಮಾದರಿಯಾಗಿದೆ. ಮನೆಯ ಮುಂದೆ ನೆಟ್ಟಿರುವ ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಉತ್ತಮ ಗಾಳಿ ಸೇವನೆಯಿಂದ ಆರೋಗ್ಯ ಸುಧಾರಿಸುತ್ತದೆ’ ಎಂದರು.</p>.<p>ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ, ‘ಸಂಘದಿಂದ ವಿವಿಧ ಉಪಯುಕ್ತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಬಡಾವಣೆಯ ಪ್ರಗತಿಯ ಸಂಕೇತ’ ಎಂದು ತಿಳಿಸಿದರು.</p>.<p>ಎನ್ಸಿಸಿ ಅಧಿಕಾರಿ ರಾಮಲಿಂಗಾರೆಡ್ಡಿ, ಶಿಕ್ಷಕಿ ಸುಲೋಚನಾ, ಕ್ಷೇಮಾಭಿವೃದ್ಧಿ ಸಂಘದ ಎಸ್.ಕುಮಾರಸ್ವಾಮಿ, ದೇವೇಂದ್ರ, ಚಿಕ್ಕಹನುಮಯ್ಯ, ರವೀಶ್, ನಂಜುಂಡಯ್ಯ, ಪಾರ್ವತಮ್ಮ, ಶಶಿಕಲಾ, ಮಹಂತು, ಗುಪ್ತಾಜಿ, ವಿಜ್ಞಾನ ಕೇಂದ್ರದ ಪಿ.ಪ್ರಸಾದ್, ಟಿ.ಜಿ. ಶಿವಲಿಂಗಯ್ಯ, ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಹವಾಮಾನ ವೈಪರೀತ್ಯಕ್ಕೆ ನಮ್ಮ ಬೇಜವಾಬ್ದಾರಿ ನಡೆ ಕಾರಣ. ನಾವು ಪ್ರಕೃತಿ ಜತೆಗೆ ಜೀವಿಸುವುದು ಕಲಿಯಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.</p>.<p>ನಗರದಲ್ಲಿ ಶನಿವಾರ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘವು ವಿವೇಕಾನಂದ ವಿದ್ಯಾಸಂಸ್ಥೆ, ರೋಟರಿ ತುಮಕೂರು, ಅರಣ್ಯ ಇಲಾಖೆ, ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮುಖಂಡ ಟಿ.ಆರ್.ಸದಾಶಿವಯ್ಯ, ‘ಬಡಾವಣೆಯ ಸಂಘ ಇತರರಿಗೆ ಮಾದರಿಯಾಗಿದೆ. ಮನೆಯ ಮುಂದೆ ನೆಟ್ಟಿರುವ ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಉತ್ತಮ ಗಾಳಿ ಸೇವನೆಯಿಂದ ಆರೋಗ್ಯ ಸುಧಾರಿಸುತ್ತದೆ’ ಎಂದರು.</p>.<p>ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ, ‘ಸಂಘದಿಂದ ವಿವಿಧ ಉಪಯುಕ್ತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಬಡಾವಣೆಯ ಪ್ರಗತಿಯ ಸಂಕೇತ’ ಎಂದು ತಿಳಿಸಿದರು.</p>.<p>ಎನ್ಸಿಸಿ ಅಧಿಕಾರಿ ರಾಮಲಿಂಗಾರೆಡ್ಡಿ, ಶಿಕ್ಷಕಿ ಸುಲೋಚನಾ, ಕ್ಷೇಮಾಭಿವೃದ್ಧಿ ಸಂಘದ ಎಸ್.ಕುಮಾರಸ್ವಾಮಿ, ದೇವೇಂದ್ರ, ಚಿಕ್ಕಹನುಮಯ್ಯ, ರವೀಶ್, ನಂಜುಂಡಯ್ಯ, ಪಾರ್ವತಮ್ಮ, ಶಶಿಕಲಾ, ಮಹಂತು, ಗುಪ್ತಾಜಿ, ವಿಜ್ಞಾನ ಕೇಂದ್ರದ ಪಿ.ಪ್ರಸಾದ್, ಟಿ.ಜಿ. ಶಿವಲಿಂಗಯ್ಯ, ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>