<p><strong>ವೈ.ಎನ್.ಹೊಸಕೋಟೆ:</strong> ಹೋಬಳಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಭಾನುವಾರ ವರದಾಂಜನೇಯಸ್ವಾಮಿ ಜಾತ್ರೆಯ ಅಂಗವಾಗಿ ಜಾರುಗಂಭ ಉತ್ಸವ ನಡೆಯಿತು.</p>.<p>ಪ್ರತಿವರ್ಷ ಪುಷ್ಯಮಾಸದಲ್ಲಿ 5 ದಿನಗಳ ಕಾಲ ಇಲ್ಲಿ ಜಾತ್ರೋತ್ಸವ ನಡೆಯುತ್ತದೆ. ಬುಧವಾರದ ಗಂಗಾಪೂಜೆಯೊಂದಿಗೆ ಆರಂಭವಾದ ಜಾತ್ರೆಯು ಭಾನುವಾರದ ಜಾರುಗಂಭದ ಉತ್ಸವದೊಂದಿಗೆ ಕೊನೆಗೊಂಡಿತು.</p>.<p>ಗ್ರಾಮದ ಹೆಣ್ಣುಮಕ್ಕಳು ಪೂರ್ಣಕುಂಭಗಳನ್ನು ಹೊತ್ತು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಭಕ್ತಾಧಿಗಳು ಸ್ವಾಮಿಯ ಬ್ರಹ್ಮರಥೋತ್ಸವವನ್ನು ಎಳೆದು ಭಕ್ತಿ ಸಮರ್ಪಿಸಿದರು.</p>.<p>5ನೇ ದಿನವಾದ ಭಾನುವಾರದಂದು ಜಾತ್ರೆಯ ವಿಶೇಷತೆಯಾದ ಜಾರುಗಂಭ ಉತ್ಸವ ನೆರವೇರಿತು. ದೇವಾಲಯದ ಆವರಣದಲ್ಲಿ ನೆಟ್ಟಿದ್ದ ಜಾರುಗಂಭಕ್ಕೆ ವೈಷ್ಣವ ಮತಸ್ಥರಿಂದ ಔಡಲಎಣ್ಣೆ ಸೇವೆ ಮಾಡಲಾಯಿತು. ನಂತರ ವಾಲ್ಮೀಕಿ ಜನಾಂಗದ ಯುವಜನರು ಮರ ಏರುವ ಮೂಲಕ ಉತ್ಸವ ನಡೆಸಿಕೊಟ್ಟರು. ಈ ವರ್ಷ ಗ್ರಾಮದ ಯುವಕ ಹನುಮಂತರಾಯಪ್ಪ ಜಾರುಗಂಭವನ್ನು ಏರಿ ಗುರಿಮುಟ್ಟಿ ಗೌರವ ಸನ್ಮಾನ ಪಡೆದರು. ಈ ಉತ್ಸವದಲ್ಲಿ ಯುವಕರು ಕಂಬವನ್ನು ಏರುವ ಮತ್ತು ಜಾರುವ ಸನ್ನಿವೇಶಗಳು ನೆರೆದಿದ್ದ ಜನರ ಮನೋರಂಜನೆ ನೀಡಿ ನಗೆಗಡಲಲ್ಲಿ ತೇಲಿಸಿತು.</p>.<p>ಆಂಧ್ರಪ್ರದೇಶ ಸೇರಿದಂತೆ ದೂರದ ದಾವಣಗೆರೆ, ಮೈಸೂರು, ಬಳ್ಳಾರಿ, ಬೆಂಗಳೂರು ಇತ್ಯಾದಿ ನಗರಗಳ ಹಾಗೂ ತಾಲ್ಲೂಕಿನ ವಿವಿಧ ಹಳ್ಳಿಗಳ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಅನ್ನಸಂತರ್ಪಣೆ, ಗುಗ್ಗರಿ ಹಂಚುವ ಮೂಲಕ ಹರಕೆ ತೀರಿಸಿದರು.</p>.<p>ವರದಾಂಜನೇಯಸ್ವಾಮಿ ಸೇವಾಸಮಿತಿ ಹಮ್ಮಿಕೊಳ್ಳುವ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಚಿಕ್ಕಹಳ್ಳಿ, ಅರ್.ಡಿ.ರೊಪ್ಪ, ಪೋತಗಾನಹಳ್ಳಿ, ಪಾಪಯ್ಯನರೊಪ್ಪ, ಕೆ.ರಾಂಪುರ, ಇಂದ್ರಬೆಟ್ಟ, ಹೊಸದುರ್ಗ, ಕಂಬದೂರು, ನೀಲಮ್ಮನಹಳ್ಳಿ, ಸೂಲನಾಯಕನಹಳ್ಳಿ, ಅಂಡೇಪಲ್ಲಿ ಗ್ರಾಮಗಳ ದೇವರು ಒಕ್ಕಲು ಅನ್ನದಾನ ಮಾಡುವುದು ಜಾತ್ರೆಯ ಸಂಪ್ರದಾಯವಾಗಿ ಬೆಳೆದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈ.ಎನ್.ಹೊಸಕೋಟೆ:</strong> ಹೋಬಳಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಭಾನುವಾರ ವರದಾಂಜನೇಯಸ್ವಾಮಿ ಜಾತ್ರೆಯ ಅಂಗವಾಗಿ ಜಾರುಗಂಭ ಉತ್ಸವ ನಡೆಯಿತು.</p>.<p>ಪ್ರತಿವರ್ಷ ಪುಷ್ಯಮಾಸದಲ್ಲಿ 5 ದಿನಗಳ ಕಾಲ ಇಲ್ಲಿ ಜಾತ್ರೋತ್ಸವ ನಡೆಯುತ್ತದೆ. ಬುಧವಾರದ ಗಂಗಾಪೂಜೆಯೊಂದಿಗೆ ಆರಂಭವಾದ ಜಾತ್ರೆಯು ಭಾನುವಾರದ ಜಾರುಗಂಭದ ಉತ್ಸವದೊಂದಿಗೆ ಕೊನೆಗೊಂಡಿತು.</p>.<p>ಗ್ರಾಮದ ಹೆಣ್ಣುಮಕ್ಕಳು ಪೂರ್ಣಕುಂಭಗಳನ್ನು ಹೊತ್ತು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಭಕ್ತಾಧಿಗಳು ಸ್ವಾಮಿಯ ಬ್ರಹ್ಮರಥೋತ್ಸವವನ್ನು ಎಳೆದು ಭಕ್ತಿ ಸಮರ್ಪಿಸಿದರು.</p>.<p>5ನೇ ದಿನವಾದ ಭಾನುವಾರದಂದು ಜಾತ್ರೆಯ ವಿಶೇಷತೆಯಾದ ಜಾರುಗಂಭ ಉತ್ಸವ ನೆರವೇರಿತು. ದೇವಾಲಯದ ಆವರಣದಲ್ಲಿ ನೆಟ್ಟಿದ್ದ ಜಾರುಗಂಭಕ್ಕೆ ವೈಷ್ಣವ ಮತಸ್ಥರಿಂದ ಔಡಲಎಣ್ಣೆ ಸೇವೆ ಮಾಡಲಾಯಿತು. ನಂತರ ವಾಲ್ಮೀಕಿ ಜನಾಂಗದ ಯುವಜನರು ಮರ ಏರುವ ಮೂಲಕ ಉತ್ಸವ ನಡೆಸಿಕೊಟ್ಟರು. ಈ ವರ್ಷ ಗ್ರಾಮದ ಯುವಕ ಹನುಮಂತರಾಯಪ್ಪ ಜಾರುಗಂಭವನ್ನು ಏರಿ ಗುರಿಮುಟ್ಟಿ ಗೌರವ ಸನ್ಮಾನ ಪಡೆದರು. ಈ ಉತ್ಸವದಲ್ಲಿ ಯುವಕರು ಕಂಬವನ್ನು ಏರುವ ಮತ್ತು ಜಾರುವ ಸನ್ನಿವೇಶಗಳು ನೆರೆದಿದ್ದ ಜನರ ಮನೋರಂಜನೆ ನೀಡಿ ನಗೆಗಡಲಲ್ಲಿ ತೇಲಿಸಿತು.</p>.<p>ಆಂಧ್ರಪ್ರದೇಶ ಸೇರಿದಂತೆ ದೂರದ ದಾವಣಗೆರೆ, ಮೈಸೂರು, ಬಳ್ಳಾರಿ, ಬೆಂಗಳೂರು ಇತ್ಯಾದಿ ನಗರಗಳ ಹಾಗೂ ತಾಲ್ಲೂಕಿನ ವಿವಿಧ ಹಳ್ಳಿಗಳ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಅನ್ನಸಂತರ್ಪಣೆ, ಗುಗ್ಗರಿ ಹಂಚುವ ಮೂಲಕ ಹರಕೆ ತೀರಿಸಿದರು.</p>.<p>ವರದಾಂಜನೇಯಸ್ವಾಮಿ ಸೇವಾಸಮಿತಿ ಹಮ್ಮಿಕೊಳ್ಳುವ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಚಿಕ್ಕಹಳ್ಳಿ, ಅರ್.ಡಿ.ರೊಪ್ಪ, ಪೋತಗಾನಹಳ್ಳಿ, ಪಾಪಯ್ಯನರೊಪ್ಪ, ಕೆ.ರಾಂಪುರ, ಇಂದ್ರಬೆಟ್ಟ, ಹೊಸದುರ್ಗ, ಕಂಬದೂರು, ನೀಲಮ್ಮನಹಳ್ಳಿ, ಸೂಲನಾಯಕನಹಳ್ಳಿ, ಅಂಡೇಪಲ್ಲಿ ಗ್ರಾಮಗಳ ದೇವರು ಒಕ್ಕಲು ಅನ್ನದಾನ ಮಾಡುವುದು ಜಾತ್ರೆಯ ಸಂಪ್ರದಾಯವಾಗಿ ಬೆಳೆದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>