ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್. ರಾಂಪುರದಲ್ಲಿ ಬುಧವಾರ ಮಧ್ಯರಾತ್ರಿ ದುಷ್ಕರ್ಮಿಗಳು ಕೊಬ್ಬರಿ ಶೆಡ್ಗೆ ಬೆಂಕಿ ಹಚ್ಚಿದ್ದು, ಕೊಬ್ಬರಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಭಸ್ಮವಾಗಿದೆ.
ಶಿವಗಂಗಮ್ಮ ಅವರು ತಮ್ಮ ಕುಟುಂಬ ಸಮೇತ ತೋಟದಲ್ಲಿ ವಾಸವಿದ್ದರು. ಮನೆಯ ಸಮೀಪದಲ್ಲಿಯೇ ಕಾಯಿ ತುಂಬಲು ಶೆಡ್ ನಿರ್ಮಿಸಿದ್ದರು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು.
ಶೆಡ್ನಲ್ಲಿದ್ದ ಸುಮಾರು 30 ಸಾವಿರ ಕೊಬ್ಬರಿ, ಟ್ರ್ಯಾಕ್ಟರ್, ಬೈಕ್ ಹಾಗೂ ಕೃಷಿ ಪರಿಕರಗಳು ಸುಟ್ಟು ಹೋಗಿವೆ. ‘ಬರದ ನಡುವೆ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದ ನಮಗೆ ಈ ಅವಘಡ ತುಂಬಾ ಸಂಕಷ್ಟ ತಂದೊಡ್ಡಿದೆ. ಏನಾದರೂ ಪರಿಹಾರ ಸಿಕ್ಕರೆ ಮತ್ತೆ ಬದುಕು ಕಟ್ಟಿಕೊಳ್ಳಬಹುದು’ ಎಂದು ರೈತ ಮಹಿಳೆ ಶಿವಗಂಗಮ್ಮ ಅಳಲು ತೋಡಿಕೊಂಡರು.