ಈಗಾಗಲೇ ಜಿಲ್ಲಾಧಿಕಾರಿ, ಮೇಯರ್, ನಗರಪಾಲಿಕೆ ಆಯುಕ್ತರು, ನಗರ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರೂ ಸ್ಪಂದಿಸಿಲ್ಲ. ಎರಡು ತಿಂಗಳಿಂದ ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ತೀವ್ರ ತೊಂದರೆಗೆ ಸಿಲುಕಿದ್ದೇವೆ ಎಂದು ಸಂಘ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ವೆಂಡಿಂಗ್ ಕಮಿಟಿ ಸದಸ್ಯರಾದ ವಸೀಂ ಅಕ್ರಂ, ಟಿ.ಎಸ್.ರಾಜಶೇಖರ್, ಎನ್.ಮುತ್ತರಾಜ್ ತಿಳಿಸಿದ್ದಾರೆ.