ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಕುಗ್ರಾಮ ಮೆಣಸಕೆರೆ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಮೆಣಸಕೆರೆದೊಡ್ಡಿ 50 ಕುಟುಂಬಗಳಿರುವ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿದೆ. ವಿದ್ಯಾರ್ಥಿಗಳಾದ ಎಂ.ಎಸ್. ವರ್ಷಿತಾ, ಎಚ್.ಎಲ್. ಪರಿಣಿತಾ, ಎಚ್.ಎಸ್. ಶಶಾಂಕ್ ಮತ್ತು ವಿದ್ಯಾ ಎಂ. ಆಗಸ್ಟ್ನಲ್ಲಿ ನಡೆದ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಆಯ್ಕೆಗೆ ಶ್ರಮಿಸಿದ ಶಿಕ್ಷಕರಾದ ಎಚ್.ಜಿ. ಸೀನಯ್ಯ ಮತ್ತು ಶಿವಲಿಂಗಯ್ಯ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.