ರೈತಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ರೈತರ ಜಮೀನಿನಲ್ಲಿರುವ ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳು ಹಾಗೂ ಖುಷ್ಕಿ ಜಮೀನಿಗೆ ಪ್ರತ್ಯೇಕ ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಎಲ್.ಬಿ.ಮಂಜುನಾಥ್, ಲ.ಪು.ಕರಿಯಪ್ಪ, ಈರಣ್ಣ, ಎಲ್.ಕೆ.ಈರಪ್ಪ, ಪ್ರಸನ್ನಕುಮಾರ್, ಲೋಕೇಶ್, ಹನುಮೇಶ್, ಕಲ್ಲೇನಹಳ್ಳಿ ಮಂಜುನಾಥ್, ಮರೆನಡುಪಾಳ್ಯದ ಕುಮಾರ್, ರಾಜಣ್ಣ, ರೈತಸಂಘದ ನಾಗರಾಜು, ಮರುಳಪ್ಪ ಉಪಸ್ಥಿತರಿದ್ದರು.