<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಗುರು ಮರುಳಸಿದ್ದೇಶ್ವರಸ್ವಾಮಿ ಜಾತ್ರೆ ಮಹೋತ್ಸವ ಜೃಂಭಣೆಯಿಂದ ನೆಡೆಯಿತು.</p>.<p>ಕುಪ್ಪೂರು ಮಠದಲ್ಲಿ ಡಿಸೆಂಬರ್ 29ರಂದು ಧ್ವಜರೋಹಣದ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. 30ರಂದು ಮಠದ ಗರ್ಭಗುಡಿಯ ಮರುಳಸಿದ್ದರ ಗದ್ದಿಗೆ ಮೇಲಿನ ಲಿಂಗಕ್ಕೆ ಅಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಪೂಜಾ ವಿಧಾನಗಳು ಬ್ರಾಹ್ಮಿ ಮೂಹೂರ್ತದಲ್ಲಿ ನೆಡೆಯಿತು.</p>.<p>ಮರುಳಪ್ಪಜ್ಜನ ಉತ್ಸವ ಮೂರ್ತಿಯನ್ನು ಬೆಳ್ಳಿ ಅಡ್ಡಪಲ್ಲಕಿಯಲ್ಲಿ ಕೂರಿಸಿ ಮತ್ತು ಸಿಂಗಾರಗೊಂಡ ಬಸವನ ವೃಷಭೋತ್ಸವಕ್ಕೆ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಜಾತ್ರೆಯ ಮಹಾ ದಾಸೋಹದ ಅನ್ನದ ರಾಶಿಗೆ ಬಸವನ ಪಾದಸ್ಪರ್ಶವು ಮದ್ಯಾಹ್ನ 1.30ಕ್ಕೆ ನೆಡೆಯಿತು.</p>.<p>ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ, ಮೇಟಿಕುರ್ಕೆ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರರು ಭಾಗವಹಿಸಿದ್ದರು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದಿದ್ದ ಭಕ್ತರು ಸೇರಿ ವಿಜೃಂಭಣೆಯಿಂದ ಜಾತ್ರೆ ಆಚರಿಸಿದರು.</p>.<p>ದೇವರ ಉತ್ಸವದಲ್ಲಿ ನಂಧಿದ್ವಜ, ಲಿಂಗದವಿರರ ಕುಣಿತ, ವೀರಗಾಸೆ, ಕುಣಿತ ಹಾಗೂ ವೀರಶೈವ ಬಿರುದಾವಳಿಗಳು ಭಾಗವಹಿಸಿ<br />ದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಗುರು ಮರುಳಸಿದ್ದೇಶ್ವರಸ್ವಾಮಿ ಜಾತ್ರೆ ಮಹೋತ್ಸವ ಜೃಂಭಣೆಯಿಂದ ನೆಡೆಯಿತು.</p>.<p>ಕುಪ್ಪೂರು ಮಠದಲ್ಲಿ ಡಿಸೆಂಬರ್ 29ರಂದು ಧ್ವಜರೋಹಣದ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. 30ರಂದು ಮಠದ ಗರ್ಭಗುಡಿಯ ಮರುಳಸಿದ್ದರ ಗದ್ದಿಗೆ ಮೇಲಿನ ಲಿಂಗಕ್ಕೆ ಅಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಪೂಜಾ ವಿಧಾನಗಳು ಬ್ರಾಹ್ಮಿ ಮೂಹೂರ್ತದಲ್ಲಿ ನೆಡೆಯಿತು.</p>.<p>ಮರುಳಪ್ಪಜ್ಜನ ಉತ್ಸವ ಮೂರ್ತಿಯನ್ನು ಬೆಳ್ಳಿ ಅಡ್ಡಪಲ್ಲಕಿಯಲ್ಲಿ ಕೂರಿಸಿ ಮತ್ತು ಸಿಂಗಾರಗೊಂಡ ಬಸವನ ವೃಷಭೋತ್ಸವಕ್ಕೆ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಜಾತ್ರೆಯ ಮಹಾ ದಾಸೋಹದ ಅನ್ನದ ರಾಶಿಗೆ ಬಸವನ ಪಾದಸ್ಪರ್ಶವು ಮದ್ಯಾಹ್ನ 1.30ಕ್ಕೆ ನೆಡೆಯಿತು.</p>.<p>ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ, ಮೇಟಿಕುರ್ಕೆ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರರು ಭಾಗವಹಿಸಿದ್ದರು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದಿದ್ದ ಭಕ್ತರು ಸೇರಿ ವಿಜೃಂಭಣೆಯಿಂದ ಜಾತ್ರೆ ಆಚರಿಸಿದರು.</p>.<p>ದೇವರ ಉತ್ಸವದಲ್ಲಿ ನಂಧಿದ್ವಜ, ಲಿಂಗದವಿರರ ಕುಣಿತ, ವೀರಗಾಸೆ, ಕುಣಿತ ಹಾಗೂ ವೀರಶೈವ ಬಿರುದಾವಳಿಗಳು ಭಾಗವಹಿಸಿ<br />ದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>