ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡುಗಲ್ಲು ಗ್ರಾಮದ ನರಸಪ್ಪ ಅವರು ಅದೇ ಗ್ರಾಮದ ಲಕ್ಷ್ಮೀನಾರಾಯಣ ಅವರಿಗೆ ಚುನಾವಣೆಗೂ ಮುನ್ನ ಸಾಲ ನೀಡಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನರಸಪ್ಪ ಕೂಡ ಸ್ಪರ್ಧಿಸಿದ್ದರು. ಲಕ್ಷ್ಮೀನಾರಾಯಣ ವಿರುದ್ಧ ಸೋತಿದ್ದರಿಂದ ಬೇಸರಗೊಂಡ ನರಸಪ್ಪ ಸಾಲ ವಾಪಸ್ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಲಕ್ಷ್ಮೀನಾರಾಯಣ ಹಾಗೂ ಅದೇ ಗ್ರಾಮದವರಾದ ಗಂಗಪ್ಪ, ನರೇಂದ್ರಬಾಬು, ಗಂಗಾಧರಪ್ಪ ಹಾಗೂ ನಾರಾಯಣಪ್ಪ ಅವರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.