<p><strong>ತುಮಕೂರು</strong>: ಸಾಲದ ಮೇಲಿನ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಗರದ ನಿವಾಸಿಗಳಾದ ಶಮ್ಮು, ಇರ್ಫಾನ್ ಎಂಬುವರ ವಿರುದ್ಧ ತಿಲಕ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ನಗರದ ಈದ್ಗಾ ಮೊಹಲ್ಲಾ ಬಳಿಯ ನಿವಾಸಿಗಳಾದ ಜಿನತ್ ಉನ್ನಿಸ್ಸಾ ಮತ್ತು ಅವರ ಮಗಳು ಸಿಮ್ರಾನ್ ಎಂಬುವರು 7 ತಿಂಗಳ ಹಿಂದೆ ಶಮ್ಮು, ಇರ್ಫಾನ್ರಿಂದ ₹25 ಸಾವಿರ ಕೈ ಸಾಲ ಪಡೆದಿದ್ದಾರೆ. ಸಾಲ ಕೊಡುವಾಗ ಪ್ರತಿ ವಾರ ₹2,500 ಬಡ್ಡಿ ಕಟ್ಟುವಂತೆ ಸೂಚಿಸಿದ್ದಾರೆ. ಜಿನತ್ ಉನ್ನಿಸ್ಸಾಗೆ 2 ವಾರಗಳಿಂದ ಬಡ್ಡಿ ಕಟ್ಟಲು ಆಗಿಲ್ಲ. ಇದರಿಂದ ಸಾಲ ಕೊಟ್ಟವರು ಮನೆಗೆ ನುಗ್ಗಿ, ಕೊಲೆ ಬೆದರಿಕೆ ಹಾಕಿ ಬಡ್ಡಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಸಾಲ ಕೊಟ್ಟವರು ಮನೆಗೆ ಬಂದು ಬಡ್ಡಿ ಕಟ್ಟದಿದ್ದರೆ ಕೊಲೆ ಮಾಡುವುದಾಗಿ ಭಯಪಡಿಸಿದ್ದಾರೆ. ಮಚ್ಚಿನಿಂದ ಕೈ ಕತ್ತರಿಸುವುದಾಗಿ ಹೆದರಿಸಿದ್ದಾರೆ. ಗರ್ಭಿಣಿಯಾಗಿರುವ ನನ್ನ ಮಗಳು ಸಿಮ್ರಾನ್ರಿಂದ ಬಡ್ಡಿಯ ಹಣ ಪಡೆದುಕೊಂಡು ಹೋಗಿದ್ದಾರೆ’ ಎಂದು ಜಿನತ್ ಉನ್ನಿಸ್ಸಾ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಕಳೆದ ತಿಂಗಳು ಸಾಲ ಬಾಧೆ, ಕಿರುಕುಳದಿಂದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ‘ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗುವುದು’ ಎಂದು ಹೇಳಿದ್ದರು. ಆದರೂ ಮೀಟರ್ ಬಡ್ಡಿ ವಸೂಲಿ ದಂಧೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಸಾಲದ ಮೇಲಿನ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಗರದ ನಿವಾಸಿಗಳಾದ ಶಮ್ಮು, ಇರ್ಫಾನ್ ಎಂಬುವರ ವಿರುದ್ಧ ತಿಲಕ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ನಗರದ ಈದ್ಗಾ ಮೊಹಲ್ಲಾ ಬಳಿಯ ನಿವಾಸಿಗಳಾದ ಜಿನತ್ ಉನ್ನಿಸ್ಸಾ ಮತ್ತು ಅವರ ಮಗಳು ಸಿಮ್ರಾನ್ ಎಂಬುವರು 7 ತಿಂಗಳ ಹಿಂದೆ ಶಮ್ಮು, ಇರ್ಫಾನ್ರಿಂದ ₹25 ಸಾವಿರ ಕೈ ಸಾಲ ಪಡೆದಿದ್ದಾರೆ. ಸಾಲ ಕೊಡುವಾಗ ಪ್ರತಿ ವಾರ ₹2,500 ಬಡ್ಡಿ ಕಟ್ಟುವಂತೆ ಸೂಚಿಸಿದ್ದಾರೆ. ಜಿನತ್ ಉನ್ನಿಸ್ಸಾಗೆ 2 ವಾರಗಳಿಂದ ಬಡ್ಡಿ ಕಟ್ಟಲು ಆಗಿಲ್ಲ. ಇದರಿಂದ ಸಾಲ ಕೊಟ್ಟವರು ಮನೆಗೆ ನುಗ್ಗಿ, ಕೊಲೆ ಬೆದರಿಕೆ ಹಾಕಿ ಬಡ್ಡಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಸಾಲ ಕೊಟ್ಟವರು ಮನೆಗೆ ಬಂದು ಬಡ್ಡಿ ಕಟ್ಟದಿದ್ದರೆ ಕೊಲೆ ಮಾಡುವುದಾಗಿ ಭಯಪಡಿಸಿದ್ದಾರೆ. ಮಚ್ಚಿನಿಂದ ಕೈ ಕತ್ತರಿಸುವುದಾಗಿ ಹೆದರಿಸಿದ್ದಾರೆ. ಗರ್ಭಿಣಿಯಾಗಿರುವ ನನ್ನ ಮಗಳು ಸಿಮ್ರಾನ್ರಿಂದ ಬಡ್ಡಿಯ ಹಣ ಪಡೆದುಕೊಂಡು ಹೋಗಿದ್ದಾರೆ’ ಎಂದು ಜಿನತ್ ಉನ್ನಿಸ್ಸಾ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಕಳೆದ ತಿಂಗಳು ಸಾಲ ಬಾಧೆ, ಕಿರುಕುಳದಿಂದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ‘ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗುವುದು’ ಎಂದು ಹೇಳಿದ್ದರು. ಆದರೂ ಮೀಟರ್ ಬಡ್ಡಿ ವಸೂಲಿ ದಂಧೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>