ಕಳೆದ ವರ್ಷದ ನ.26ರಂದು ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು, ಬಡ್ಡಿ ಹಣ ಕಟ್ಟಲು ಆಗದೆ ನಗರದ ಸದಾಶಿವ ನಗರದಲ್ಲಿ ದಂಪತಿ, ಮೂರು ಜನ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐದು ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಂತರ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದ್ದರು. ಈಗ ಪೊಲೀಸ್ ಅಧಿಕಾರಿಗಳು ಬಡ್ಡಿ ದಂಧೆ ತಡೆಗೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ.