ತಹಶೀಲ್ದಾರ್ ಬಿ.ಆರತಿ ಪ್ರತಿಕ್ರಿಯಿಸಿ, ಹೈಕೋರ್ಟ್ ಆದೇಶದಂತೆ ಕ್ರಮ ಕೈಗೊಂಡಿದ್ದೇವೆ. ಶಾಲೆಯ ದಾರಿಯನ್ನು ಒತ್ತುವರಿಮಾಡಿಕೊಂಡಿದ್ದ ಒಂದು ಗುಜರಿ ಅಂಗಡಿಯನ್ನು ಹೊರತುಪಡಿಸಿ ಯಾವುದೇ ವಾಸದ ಮನೆಯನ್ನು ಕೆಡವಿಲ್ಲ. ದಾರಿಗೆ ಅಗತ್ಯವಿದ್ದಷ್ಟು ಜಾಗವನ್ನು ಮಾತ್ರ ತೆರವುಗೊಳಿಸಿದ್ದೇವೆ. ಸಂಬಂಧಪಟ್ಟ ಒತ್ತುವರಿದಾರರಿಗೆ ಸೂಚನೆ ನೀಡುವುದರ ಜೊತೆಗೆ ಅಧಿಕಾರಿಗಳು ಫೋನ್ ಮೂಲಕವೂ ವಿಚಾರ ತಿಳಿಸಿದ್ದರೂ, ಒತ್ತುವರಿದಾರರು ತೆರವುಗೊಳಿಸದ ಕಾರಣ ಅನಿವಾರ್ಯವಾಗಿ ನ್ಯಾಯಾಲಯದ ಆದೇಶ ಪಾಲಿಸಬೇಕಾಯಿತು ಎಂದರು.