ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಬಿಜೆಪಿಗೆ ಬಂದಿದ್ದಾರೆ. ಅವರನ್ನು ವಿಶ್ವಾಸದಿಂದ ಸ್ವಾಗತಿಸಲಾಗಿದೆ. ಅವರಿಗೆ ಪಕ್ಷವು ಯಾವುದೇ ಭರವಸೆ ನೀಡಿಲ್ಲ. ಕೆಲವೆಡೆ ಪಕ್ಷದ ನಿರ್ಧಾರಗಳು, ನೀಡುವ ಜವಾಬ್ದಾರಿಯನ್ನು ಸ್ವಾಗತಿಸುವೆ ಎಂದು ಅವರು ಹೇಳುತ್ತಿದ್ದಾರೆ. ಆದರೂ, ಕ್ಷೇತ್ರದಲ್ಲಿ ತೀವ್ರವಾಗಿ ಸಂಚರಿಸಿ ಎಲ್ಲರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು.