ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

‘ಹೇಮಾವತಿ ಲಿಂಕ್ ಕೆನಾಲ್’ ನಿಲ್ಲಿಸುವ ಪ್ರಯತ್ನ: ಸಚಿವ ಜಿ. ಪರಮೇಶ್ವರ

Published : 19 ಮೇ 2024, 6:28 IST
Last Updated : 19 ಮೇ 2024, 6:28 IST
ಫಾಲೋ ಮಾಡಿ
Comments
ಕೃಷ್ಣಪ್ಪ ಗಂಡಸೇ: ಶ್ರೀನಿವಾಸ್ ಪ್ರಶ್ನೆ
ತುಮಕೂರು: ‘ಶಾಸಕ ಎಂ.ಟಿ.ಕೃಷ್ಣಪ್ಪ ಗಂಡಸಾದರೆ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ಮುಂದೆ ಬಂದು ಮಾತನಾಡಲಿ. ಕೊರಳ ಪಟ್ಟಿ ಹಿಡಿದು ಕೇಳುತ್ತೇನೆ’ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಗುಡುಗಿದರು. ‘ಹೇಮಾವತಿ ಲಿಂಕ್ ಕೆನಾಲ್’ ವಿರೋಧಿ ಹೋರಾಟ ಸಭೆಯಲ್ಲಿ ‘ಶಾಸಕ ಶ್ರೀನಿವಾಸ್ ಕಳ್ಳ ಕಾಸಣ್ಣ ಗುಳ್ಳೇನರಿ’ ಎಂದು ಎಂ.ಟಿ.ಕೃಷ್ಣಪ್ಪ ಜರಿದಿದ್ದರು. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಎಲ್ಲೋ ಮೈಕ್ ಹಿಡಿದುಕೊಂಡು ಕೃಷ್ಣಪ್ಪ ಮಾತನಾಡುವುದಲ್ಲ. ಗುಬ್ಬಿಗೆ ಬಂದು ಮಾತನಾಡಲಿ. ಆಗ ತೋರಿಸುತ್ತೇನೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ‘ಕೃಷ್ಣಪ್ಪ ಮಾಡುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ. ಕುಣಿಗಲ್ ತಾಲ್ಲೂಕಿಗೆ 3 ಟಿಎಂಸಿ ನೀರು ಹಂಚಿಕೆಯಾಗಿದೆ. ಅಷ್ಟು ನೀರು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಗುಬ್ಬಿ ತಾಲ್ಲೂಕಿನ ಜನರ ಹಿತ ಕಾಯುವುದು ನನಗೆ ಗೊತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT