ತುಮಕೂರು: ಕಾನೂನಿನ ಚೌಕಟ್ಟಿನಲ್ಲಿ ಬೆಂಗಳೂರು ಬಂದ್ ಮಾಡಬೇಕು. ಸರ್ಕಾರಿ ಅಥವಾ ಖಾಸಗಿ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಬಾರದು. ಅನುಮತಿ ಪಡೆದುಕೊಳ್ಳಬೇಕು. ನಿಯಮ ಬಾಹಿರವಾಗಿ ನಡೆದುಕೊಂಡರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಂತಿಯುವಾಗಿ ಬಂದ್, ಪ್ರತಿಭಟನೆ ಮಾಡಿದರೆ ಸರ್ಕಾರ ಅನುಮತಿ ಕೊಡಲಿದೆ. ನಮ್ಮ ಜೊತೆ ಸಹಕಾರ ನೀಡಬೇಕು’ ಎಂದರು.