ರಾಗಿ, ಹೂವಿನ ತಾಕುಗಳಲ್ಲಿ ಬೆಳೆಯುವ ಕಳೆಗಳನ್ನು ಸೈಕಲ್ ಚಕ್ರದ ಕುಂಟೆಯನ್ನು ಒಬ್ಬ ವ್ಯಕ್ತಿ ಸಾಲುಗಳಲ್ಲಿ ನೂಕಿಕೊಂಡು ಸುಲಭವಾಗಿ ತೆಗೆಯಬಹುದು. ರಾಸುಗಳ ಕೊರತೆಯಿಂದ ಮರದ ಕುಂಟೆ ಮೂಲಕ ಕಳೆ ತೆಗೆಯುವುದು ಕಷ್ಟ ಮತ್ತು ಹೆಚ್ಚಿನ ಖರ್ಚು ಬರುತ್ತದೆ. ದನಗಳ ಕುಂಟೆಯಲ್ಲಿ ಅಚ್ಚುಕಟ್ಟಾಗಿ ಕಳೆ ತೆಗೆಯಬಹುದು. ಎತ್ತುಗಳು ಇಲ್ಲದೇ ಇರುವುದರಿಂದ ರೈತರು ಇದರ ಹಿಂದೆ ಬಿದ್ದಿದ್ದಾರೆ ಎನ್ನುತ್ತಾರೆ ಸಿ.ಎಸ್.ಜಿ. ಪಾಳ್ಯದ ರೈತ ನಾರಾಯಣಪ್ಪ.