<p><strong>ತೋವಿನಕೆರೆ</strong>: ಮೀತಿ ಮೀರಿದ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುವ ಭಯ ಕಾಡುತ್ತಿದೆ ಎಂದು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ನಿರ್ದೇಶಕ ಎಸ್.ಎನ್. ಸುಶೀಲ್ ಅಭಿಪ್ರಾಯಪಟ್ಟರು.</p>.<p>ರೈತ ಸಂಪರ್ಕ ಕೇಂದ್ರದ ಅವರಣದಲ್ಲಿ ನೇಗಿಲ ಸಿದ್ಧ ರೈತ ಉತ್ಪಾದಕರ ಕಂಪನಿ ಸಹಕಾರದಿಂದ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ಏರ್ಪಡಿಸಿದ್ದ ವಿಶ್ವ ಮಣ್ಣು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆಯಿಂದ ಪಂಜಾಬ್ನಲ್ಲಿ ಉಂಟಾದ ಅನಾಹುತಗಳ ಮಾಹಿತಿ ನೀಡಿದರು.</p>.<p>ಹಿರಿಯ ವಿಜ್ಙಾನಿ ಡಾ.ಎ.ಎನ್. ಶೈಲೇಶ್ ಮಾತನಾಡಿ, ಪರತಂತ್ರ ಜೀವಿಗಳು, ಬೂಸ್ಟ್ ಪೌಡರ್ ಬಳಕೆ, ಸೈನ್ಯ ಹುಳ ಬಗ್ಗೆ, ಶೀಲಿಂದ್ರಗಳ ಮಾಹಿತಿ ಹಂಚಿಕೊಂಡರು.</p>.<p>ಬ್ಯೂರೊದಲ್ಲಿ ಸಂಶೋಧನೆ ಮಾಡಿರುವ ಹಲವು ಕೀಟಗಳು, ಜೀವಾಣುಗಳು, ಪೌಡರ್ಗಳ ಪ್ರದರ್ಶನ ಮಾಡಲಾಯಿತು.</p>.<p>ಡ್ರೋನ್ ಬಳಕೆಯಿಂದ ರೈತರಿಗೆ ಅಗುವ ಅನುಕೂಲದ ಬಗ್ಗೆ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ಮಾಡಲಾಯಿತು.</p>.<p>ಡಾ.ಕೊಲ್ಲಾ ಶ್ರೀದೇವಿ, ಹಿರಿಯಾ ವಿಜ್ಞಾನಿಗಳಾದ ಡಾ.ಆರ್ ವಸುಂಧರ್ ಆರ್, ಡಾ.ಬಿ.ಎಸ್.ಗೊಟಾಯಿಲ್, ಡಾ.ಸೆಲ್ವರಾಜ್, ವಿಜ್ಞಾನಿ ಡಾ. ರಿಚಾ, ಡಾ.ರಮ್ಯ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಮರೇನಾಯ್ಕನಹಳ್ಳಿ ರಮೇಶ್, ವಿಶ್ವ ರಾಕೇಶ್, ಹನುಮಂತರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ</strong>: ಮೀತಿ ಮೀರಿದ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುವ ಭಯ ಕಾಡುತ್ತಿದೆ ಎಂದು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ನಿರ್ದೇಶಕ ಎಸ್.ಎನ್. ಸುಶೀಲ್ ಅಭಿಪ್ರಾಯಪಟ್ಟರು.</p>.<p>ರೈತ ಸಂಪರ್ಕ ಕೇಂದ್ರದ ಅವರಣದಲ್ಲಿ ನೇಗಿಲ ಸಿದ್ಧ ರೈತ ಉತ್ಪಾದಕರ ಕಂಪನಿ ಸಹಕಾರದಿಂದ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ಏರ್ಪಡಿಸಿದ್ದ ವಿಶ್ವ ಮಣ್ಣು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆಯಿಂದ ಪಂಜಾಬ್ನಲ್ಲಿ ಉಂಟಾದ ಅನಾಹುತಗಳ ಮಾಹಿತಿ ನೀಡಿದರು.</p>.<p>ಹಿರಿಯ ವಿಜ್ಙಾನಿ ಡಾ.ಎ.ಎನ್. ಶೈಲೇಶ್ ಮಾತನಾಡಿ, ಪರತಂತ್ರ ಜೀವಿಗಳು, ಬೂಸ್ಟ್ ಪೌಡರ್ ಬಳಕೆ, ಸೈನ್ಯ ಹುಳ ಬಗ್ಗೆ, ಶೀಲಿಂದ್ರಗಳ ಮಾಹಿತಿ ಹಂಚಿಕೊಂಡರು.</p>.<p>ಬ್ಯೂರೊದಲ್ಲಿ ಸಂಶೋಧನೆ ಮಾಡಿರುವ ಹಲವು ಕೀಟಗಳು, ಜೀವಾಣುಗಳು, ಪೌಡರ್ಗಳ ಪ್ರದರ್ಶನ ಮಾಡಲಾಯಿತು.</p>.<p>ಡ್ರೋನ್ ಬಳಕೆಯಿಂದ ರೈತರಿಗೆ ಅಗುವ ಅನುಕೂಲದ ಬಗ್ಗೆ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ಮಾಡಲಾಯಿತು.</p>.<p>ಡಾ.ಕೊಲ್ಲಾ ಶ್ರೀದೇವಿ, ಹಿರಿಯಾ ವಿಜ್ಞಾನಿಗಳಾದ ಡಾ.ಆರ್ ವಸುಂಧರ್ ಆರ್, ಡಾ.ಬಿ.ಎಸ್.ಗೊಟಾಯಿಲ್, ಡಾ.ಸೆಲ್ವರಾಜ್, ವಿಜ್ಞಾನಿ ಡಾ. ರಿಚಾ, ಡಾ.ರಮ್ಯ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಮರೇನಾಯ್ಕನಹಳ್ಳಿ ರಮೇಶ್, ವಿಶ್ವ ರಾಕೇಶ್, ಹನುಮಂತರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>