ಸೊಳ್ಳೆಗಳ ಉತ್ಪತ್ತಿ ತಾಣ ನಿರ್ಮೂಲನೆ ಮಾಡಬೇಕು. ಚರಂಡಿ, ತೆಂಗು, ಎಳನೀರು ಚಿಪ್ಪು, ಟೈರ್, ಗಿಡಗಳ ಪಾಟ್, ನೀರಿನ ತೊಟ್ಟಿಗಳಲ್ಲಿ ಬಳಸದ ನೀರು ಸೇರಿದಂತೆ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಧೂಮೀಕರಣ ಮಾಡಿ, ಚರಂಡಿ, ಗುಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆ ಬಳಸಿಕೊಂಡು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.