ವಿಚಾರಣೆಯಿಂದ ಹೊರಬಂದ ರವಿಕುಮಾರ್ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡುತ್ತ, ನನ್ನ ಹಣಕಾಸಿನ ವ್ಯವಹಾರದ ಕುರಿತು ಕೇಳಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಮಾಡಿದ ವೆಚ್ಚದ ಕುರಿತು ವಿಚಾರಿಸಿದರು. ಎಲ್ಲದಕ್ಕೂ ನನ್ನ ಲೆಕ್ಕಪರಿಶೋಧಕರ ಸಹಾಯದಿಂದ ಉತ್ತರ ನೀಡಿದ್ದೇನೆ. ಕರೆದಾಗ ವಿಚಾರಣೆ ಬರುವಂತೆ ಹೇಳಿದ್ದಾರೆ. ಅವರ ವಿಚಾರಣೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದು ತಿಳಿಸಿದರು.