ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಯೋಜನೆಯ ಅನುದಾನ ಕಡಿತ, ಖಾಸಗೀಕರಣ, ಖಾಸಗಿ ಎಲ್ಕೆಜಿ, ಯುಕೆಜಿ ತೆರೆಯಲು ವಿರೋಧಿಸಿ, ಕನಿಷ್ಠ ವೇತನ, ಖಾತ್ರಿ ಪಿಂಚಣಿ ಮುಂಬಡ್ತಿಯಲ್ಲಿ ಮಿಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಭಾರತ ಕಾರ್ಮಿಕ ಸಂಘಗಳ ಕೆಂದ್ರ (ಸಿಐಟಿ)ಯು ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.