ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವಣನಾಗಲು ಸಿದ್ಧ: ಸಚಿವ ಕೆ.ಎನ್.ರಾಜಣ್ಣ

Published 19 ಜನವರಿ 2024, 10:12 IST
Last Updated 19 ಜನವರಿ 2024, 10:12 IST
ಅಕ್ಷರ ಗಾತ್ರ

ತುಮಕೂರು: ‘ಬಿಜೆಪಿಯವರು ನನಗೆ ರಾವಣ ಎಂದು ಕರೆದಿದ್ದಾರೆ. ಇದರಿಂದ ಬೇಜಾರಿಲ್ಲ. ರಾವಣ ಎಂದು ಕರೆಸಿಕೊಳ್ಳಲು ಸಿದ್ಧನಿದ್ದೇನೆ. ಅವನಂತಹ ದೈವ ಭಕ್ತ ಮತ್ತೊಬ್ಬ ಇರಲಿಲ್ಲ. ಬಿಜೆಪಿಯವರು ಡೋಂಗಿ ದೈವ ಭಕ್ತರು’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಬಾಬ್ರಿ ಮಸೀದಿ ಗಲಾಟೆಯ ಸಮಯದಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದೆ. ಒಂದು ಟೆಂಟ್‌ನಲ್ಲಿ ಎರಡು ಬೊಂಬೆ ತಂದಿಟ್ಟು ಶ್ರೀರಾಮ ಎಂದು ಹೇಳುತ್ತಿದ್ದರು. ಅದು ಟೂರಿಂಗ್‌ ಟಾಕಿಸ್‌ನ ಬೊಂಬೆಗಳಂತೆ ಕಂಡಿದ್ದವು’ ಎಂದು ರಾಜಣ್ಣ ಸಮಾರಂಭವೊದರಲ್ಲಿ ಹೇಳಿದ್ದರು. ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ರಾವಣ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.

ಬೊಂಬೆಯನ್ನು ದೇವರು ಎಂದು ಕರೆದರೆ ತಪ್ಪೇನಿದೆ? ಬೊಂಬೆಯಲ್ಲಿ ದೈವತ್ವ ಇಲ್ಲವೆ? ಹೊಲದಲ್ಲಿ ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡುತ್ತೇವೆ. ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡುತ್ತಾರೆ. ಅದು ನಮ್ಮ ನಂಬಿಕೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಹಿಂದೆ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ‘ರಾವಣಾಯಣ’ ನಾಟಕ ಮಾಡಿದ್ದರು. ಆ ನಾಟಕದಲ್ಲಿ ಸೀತೆ ಮೇಲೆ ರಾವಣ ಬಲಾತ್ಕಾರ ಮಾಡುವುದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ಲವೆ? ರಾವಣ ಶಿವನ ಭಕ್ತ. ರಾವಣನಿಗೆ ಶಿವ ಆತ್ಮಲಿಂಗ ಕೊಟ್ಟಿದ್ದು. ಹಾಗಾಗಿ ನಾನು ಶ್ರೀರಾಮ ಹಾಗೂ ರಾವಣ ಇಬ್ಬರ ಪರ ಇದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT