<p><strong>ಪಾವಗಡ:</strong> ಇತಿಹಾಸದ ಬಗ್ಗೆ ಮಾಹಿತಿ ಇದ್ದಲ್ಲಿ, ಭವಿಷ್ಯದ ಹಾದಿ ಸುಗಮವಾಗಿರುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ದೇವರ ಕೊಂಡಾರೆಡ್ಡಿ ಹೇಳಿದರು.</p>.<p>ತಾಲ್ಲೂಕಿನ ನಿಡಗಲ್ಲಿನಲ್ಲಿ ಭಾನುವಾರ ವಾಲ್ಮೀಕಿ ಮಹರ್ಷಿ ಆಶ್ರಮ ಆಯೋಜಿಸಿದ್ದ ‘ನಿಡುಗಲ್ಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ಇತಿಹಾಸದಲ್ಲಿ ಅನೇಕರ ತ್ಯಾಗ ಬಲಿದಾನದ ಕಥೆಗಳಿವೆ. ಪ್ರತಿಯೊಂದು ಊರಿನ ಹಿನ್ನೆಲೆ, ಪ್ರತಿಯೊಂದು ಕೋಟೆ, ಕೊತ್ತಲು, ದೇವಾಲಯ, ಕೆರೆ, ಕಲ್ಲುಗಳಿಗೆ ಒಂದೊಂದು ಕಥೆ ಇರುತ್ತದೆ. ಈ ಘಟನಾ ವಿಷಯವನ್ನು ಶೋಧಿಸುವುದೇ ಇತಿಹಾಸದ ಮುಖ್ಯ ಕಾರ್ಯ ಎಂದರು.</p>.<p>ನಿಡುಗಲ್ಲಿನ ಬಗ್ಗೆ ಸುಮಾರು 30 ಶಾಸನಗಳಲ್ಲಿ ಮಾಹಿತಿ ಲಭ್ಯವಿದೆ. ನೀರು ಮತ್ತು ದೇವಾಲಯ ಇತಿಹಾಸದ ಮೂಲ ಅಂಶಗಳು. ಬಾವಿ ಕೆರೆಗಳ ನಾಶದಿಂದ ಜನವಸತಿ ನಾಶವಾಗುತ್ತದೆ. ದೇವಾಲಯಗಳ ನಾಶದಿಂದ ಸ್ಥಳೀಯ ಪರಂಪರೆ ಹಾಳಾಗುತ್ತದೆ. ಹಾಗಾಗಿ ಕೆರೆ, ದೇವಾಲಯಗಳ ಜೀರ್ಣೋದ್ಧಾರ ನಡೆಯಬೇಕು<br />ಎಂದರು.</p>.<p>ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ, ನಿಡಗಲ್ಲು ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಹೊಂದಿರುವ ನೆಲೆ. ಎಲ್ಲರ ಸಹಕಾರದೊಂದಿಗೆ ಸ್ಥಳೀಯ ಇತಿಹಾಸ ಸ್ಮಾರರಕಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗುವುದು ಎಂದರು.</p>.<p>ಸಂಶೋಧಕ ಡಾ.ಯೋಗೀಶ್ವರಪ್ಪ, ಪಾಳೇಗಾರಿಕೆ ಎನ್ನುವುದು ವಿಜಯನಗರದ ಕಾಲದ ಅರಸರು ನೀಡುತ್ತಿದ್ದ ಪದವಿ. ಸಾಮ್ರಾಜ್ಯದ ಅಧಿಕಾರ ವಿಕೇಂದ್ರೀಕರಣವನ್ನು ಮಾಡಿದಾಗ ಸ್ಥಳೀಯ ಆಡಳಿತಕ್ಕಾಗಿ ಆಯ್ಕೆಯಾದವರು ಪಾಳೆಗಾರರು. ಈ ಪಾಳೆಯಗಾರರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ ಎಂದರು.</p>.<p>ಡಾ.ನಂಜುಂಡಸ್ವಾಮಿ, ಡಾ.ವಿ.ಆರ್. ಚೆಲುವರಾಜನ್, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ನಿವೃತ್ತ ಜೈಲರ್ ಹರ್ತಿಕೋಟೆ ವೀರೇಂದ್ರ ಸಿಂಹ, ಜನಪದ ಸಾಹಿತಿ ಸಣ್ಣನಾಗಪ್ಪ, ಡಾ.ಕೆ.ವಿ.ಮುದ್ದುವೀರಪ್ಪ, ಡಾ.ಗೋವಿಂದರಾಯ, ಡಾ.ಬಗ್ಗನಡು ನಾಗಭೂಷಣ್,<br />ಹೊ.ಮ.ನಾಗರಾಜು, ಹೊಟ್ಟೆ ಬೊಮ್ಮನಹಳ್ಳಿ ತಿಮ್ಮಾರೆಡ್ಡಿ, ಮುಖಂಡರಾದ ಜಗನ್ನಾಥ, ಗಿರಿಜನ ನಾಯಕ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಪ್ರಭಾಕರ್, ಎಪಿಎಂಸಿ ಅಧ್ಯಕ್ಷ ಮಾರಣ್ಣ, ಡಾ.ಎಚ್.ಕೆ. ನರಸಿಂಹ ಮೂರ್ತಿ, ಅಂಬಿಕಾ ರಮೇಶ್, ಬೆಳ್ಳಿಬಟ್ಲು ಜಯಮ್ಮ, ಲೋಕೇಶ್ ಪಾಳೇಗಾರ್, ಓಂಕಾರನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ಇತಿಹಾಸದ ಬಗ್ಗೆ ಮಾಹಿತಿ ಇದ್ದಲ್ಲಿ, ಭವಿಷ್ಯದ ಹಾದಿ ಸುಗಮವಾಗಿರುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ದೇವರ ಕೊಂಡಾರೆಡ್ಡಿ ಹೇಳಿದರು.</p>.<p>ತಾಲ್ಲೂಕಿನ ನಿಡಗಲ್ಲಿನಲ್ಲಿ ಭಾನುವಾರ ವಾಲ್ಮೀಕಿ ಮಹರ್ಷಿ ಆಶ್ರಮ ಆಯೋಜಿಸಿದ್ದ ‘ನಿಡುಗಲ್ಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ಇತಿಹಾಸದಲ್ಲಿ ಅನೇಕರ ತ್ಯಾಗ ಬಲಿದಾನದ ಕಥೆಗಳಿವೆ. ಪ್ರತಿಯೊಂದು ಊರಿನ ಹಿನ್ನೆಲೆ, ಪ್ರತಿಯೊಂದು ಕೋಟೆ, ಕೊತ್ತಲು, ದೇವಾಲಯ, ಕೆರೆ, ಕಲ್ಲುಗಳಿಗೆ ಒಂದೊಂದು ಕಥೆ ಇರುತ್ತದೆ. ಈ ಘಟನಾ ವಿಷಯವನ್ನು ಶೋಧಿಸುವುದೇ ಇತಿಹಾಸದ ಮುಖ್ಯ ಕಾರ್ಯ ಎಂದರು.</p>.<p>ನಿಡುಗಲ್ಲಿನ ಬಗ್ಗೆ ಸುಮಾರು 30 ಶಾಸನಗಳಲ್ಲಿ ಮಾಹಿತಿ ಲಭ್ಯವಿದೆ. ನೀರು ಮತ್ತು ದೇವಾಲಯ ಇತಿಹಾಸದ ಮೂಲ ಅಂಶಗಳು. ಬಾವಿ ಕೆರೆಗಳ ನಾಶದಿಂದ ಜನವಸತಿ ನಾಶವಾಗುತ್ತದೆ. ದೇವಾಲಯಗಳ ನಾಶದಿಂದ ಸ್ಥಳೀಯ ಪರಂಪರೆ ಹಾಳಾಗುತ್ತದೆ. ಹಾಗಾಗಿ ಕೆರೆ, ದೇವಾಲಯಗಳ ಜೀರ್ಣೋದ್ಧಾರ ನಡೆಯಬೇಕು<br />ಎಂದರು.</p>.<p>ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ, ನಿಡಗಲ್ಲು ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಹೊಂದಿರುವ ನೆಲೆ. ಎಲ್ಲರ ಸಹಕಾರದೊಂದಿಗೆ ಸ್ಥಳೀಯ ಇತಿಹಾಸ ಸ್ಮಾರರಕಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗುವುದು ಎಂದರು.</p>.<p>ಸಂಶೋಧಕ ಡಾ.ಯೋಗೀಶ್ವರಪ್ಪ, ಪಾಳೇಗಾರಿಕೆ ಎನ್ನುವುದು ವಿಜಯನಗರದ ಕಾಲದ ಅರಸರು ನೀಡುತ್ತಿದ್ದ ಪದವಿ. ಸಾಮ್ರಾಜ್ಯದ ಅಧಿಕಾರ ವಿಕೇಂದ್ರೀಕರಣವನ್ನು ಮಾಡಿದಾಗ ಸ್ಥಳೀಯ ಆಡಳಿತಕ್ಕಾಗಿ ಆಯ್ಕೆಯಾದವರು ಪಾಳೆಗಾರರು. ಈ ಪಾಳೆಯಗಾರರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ ಎಂದರು.</p>.<p>ಡಾ.ನಂಜುಂಡಸ್ವಾಮಿ, ಡಾ.ವಿ.ಆರ್. ಚೆಲುವರಾಜನ್, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ನಿವೃತ್ತ ಜೈಲರ್ ಹರ್ತಿಕೋಟೆ ವೀರೇಂದ್ರ ಸಿಂಹ, ಜನಪದ ಸಾಹಿತಿ ಸಣ್ಣನಾಗಪ್ಪ, ಡಾ.ಕೆ.ವಿ.ಮುದ್ದುವೀರಪ್ಪ, ಡಾ.ಗೋವಿಂದರಾಯ, ಡಾ.ಬಗ್ಗನಡು ನಾಗಭೂಷಣ್,<br />ಹೊ.ಮ.ನಾಗರಾಜು, ಹೊಟ್ಟೆ ಬೊಮ್ಮನಹಳ್ಳಿ ತಿಮ್ಮಾರೆಡ್ಡಿ, ಮುಖಂಡರಾದ ಜಗನ್ನಾಥ, ಗಿರಿಜನ ನಾಯಕ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಪ್ರಭಾಕರ್, ಎಪಿಎಂಸಿ ಅಧ್ಯಕ್ಷ ಮಾರಣ್ಣ, ಡಾ.ಎಚ್.ಕೆ. ನರಸಿಂಹ ಮೂರ್ತಿ, ಅಂಬಿಕಾ ರಮೇಶ್, ಬೆಳ್ಳಿಬಟ್ಲು ಜಯಮ್ಮ, ಲೋಕೇಶ್ ಪಾಳೇಗಾರ್, ಓಂಕಾರನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>