<p><strong>ಕುಣಿಗಲ್:</strong> ‘ತಾಲ್ಲೂಕಿನ ಗುತ್ತಿಗೆದಾರರಿಗೆ ವಿವಿಧ ಸರ್ಕಾರಿ ಇಲಾಖೆಗಳಿಂದ ಸುಮಾರು ₹500ಕೋಟಿ ಹಣ ಬಿಡುಗಡೆಯಾಗಬೇಕಿದೆ. ಬಿಲ್ ಪಾವತಿಗೆ ವ್ಯವಸ್ಥೆಯಾಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದು ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆ ನಾರಾಯಣ ಎಚ್ಚರಿಕೆ ನೀಡಿದರು.</p>.<p>ತಾಲ್ಲೂಕು ಗುತ್ತಿಗೆದಾರರ ಸಂಘದ ಸದಸ್ಯರು ಸೋಮವಾರ ಸಭೆ ನಡೆಸಿದರು.</p>.<p>ಎರಡು ವರ್ಷದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಬೀದಿಗೆ ಬಿದ್ದು, ಮಾಡಿರುವ ಸಾಲ ಸಕಾಲಕ್ಕೆ ತೀರಿಸಲಾಗದೆ ಇಡೀ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿವೆ. ಸರ್ಕಾರಗಳು ₹10 ಕೋಟಿ ಹಣ ಇದ್ದರೆ ₹50 ಕೋಟಿಯ ಕಾಮಗಾರಿಗೆ ಟೆಂಡರ್ ಕಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ₹200 ಕೋಟಿ, ಕಾವೇರಿ ನೀರಾವರಿ ನಿಗಮ ₹150 ಕೋಟಿ, ಜೆಜೆಎಂ ₹50 ಕೋಟಿ, ಜಿಲ್ಲಾ ಪಂಚಾಯಿತಿ ₹10 ಕೋಟಿ, ಪುರಸಭೆ ಎಸ್ಎಫ್ಸಿ ಯೋಜನೆ ₹5 ಕೋಟಿ, ಸಣ್ಣ ನೀರಾವರಿ ಇಲಾಖೆ ₹6 ಕೋಟಿ ಬಾಕಿಯ ಪಟ್ಟಿಯಾಗಿದೆ ಎಂದರು.</p>.<p>ಗುತ್ತಿಗೆದಾರ ಎಸ್.ಆರ್.ಚಿಕ್ಕಣ್ಣ ಮಾತನಾಡಿ, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ತಡವಾಗಿ ಪ್ರಾರಂಭವಾಗುತ್ತದೆ. ಸೈಟ್ ವಶಕ್ಕೆ ನೀಡುವಲ್ಲಿ ವಿಳಂಬವಾಗುತ್ತಿದೆ. ಕಾಮಗಾರಿಗಳ ಹಣ ಬಿಡುಗಡೆಯಾಗಿದ್ದರೂ, ಗುತ್ತಿಗೆದಾರರ ಬಿಲ್ ಪಾವತಿಗೆ ಅಧಿಕಾರಿಗಳು ಮತ್ತು ಸರ್ಕಾರ ಅಡ್ಡಿಯಾಗಿದೆ ಎಂದು ದೂರಿದರು.</p>.<p>ಗುತ್ತಿಗೆದಾರ ಜೆಸಿಬಿ ರಾಜಣ್ಣ, ತಾಲ್ಲೂಕಿನಲ್ಲಿ ಬಹುತೇಕ ಗುತ್ತಿಗೆದಾರರು ಕಾಂಗ್ರೆಸ್ ಪಕ್ಷದವರೆ ಇದ್ದಾರೆ. ಶಾಸಕರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಎರಡು ವರ್ಷದಿಂದ ಬಿಲ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.</p>.<p>ಕೃಷ್ಣೆಗೌಡ, ಮಂಜಯ್ಯ, ರುಕ್ಮಾಂಗದ, ನಾಗರಾಜು ವೆಂಕಟೇಶ್, ಪರಮೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ‘ತಾಲ್ಲೂಕಿನ ಗುತ್ತಿಗೆದಾರರಿಗೆ ವಿವಿಧ ಸರ್ಕಾರಿ ಇಲಾಖೆಗಳಿಂದ ಸುಮಾರು ₹500ಕೋಟಿ ಹಣ ಬಿಡುಗಡೆಯಾಗಬೇಕಿದೆ. ಬಿಲ್ ಪಾವತಿಗೆ ವ್ಯವಸ್ಥೆಯಾಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದು ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆ ನಾರಾಯಣ ಎಚ್ಚರಿಕೆ ನೀಡಿದರು.</p>.<p>ತಾಲ್ಲೂಕು ಗುತ್ತಿಗೆದಾರರ ಸಂಘದ ಸದಸ್ಯರು ಸೋಮವಾರ ಸಭೆ ನಡೆಸಿದರು.</p>.<p>ಎರಡು ವರ್ಷದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಬೀದಿಗೆ ಬಿದ್ದು, ಮಾಡಿರುವ ಸಾಲ ಸಕಾಲಕ್ಕೆ ತೀರಿಸಲಾಗದೆ ಇಡೀ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿವೆ. ಸರ್ಕಾರಗಳು ₹10 ಕೋಟಿ ಹಣ ಇದ್ದರೆ ₹50 ಕೋಟಿಯ ಕಾಮಗಾರಿಗೆ ಟೆಂಡರ್ ಕಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ₹200 ಕೋಟಿ, ಕಾವೇರಿ ನೀರಾವರಿ ನಿಗಮ ₹150 ಕೋಟಿ, ಜೆಜೆಎಂ ₹50 ಕೋಟಿ, ಜಿಲ್ಲಾ ಪಂಚಾಯಿತಿ ₹10 ಕೋಟಿ, ಪುರಸಭೆ ಎಸ್ಎಫ್ಸಿ ಯೋಜನೆ ₹5 ಕೋಟಿ, ಸಣ್ಣ ನೀರಾವರಿ ಇಲಾಖೆ ₹6 ಕೋಟಿ ಬಾಕಿಯ ಪಟ್ಟಿಯಾಗಿದೆ ಎಂದರು.</p>.<p>ಗುತ್ತಿಗೆದಾರ ಎಸ್.ಆರ್.ಚಿಕ್ಕಣ್ಣ ಮಾತನಾಡಿ, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ತಡವಾಗಿ ಪ್ರಾರಂಭವಾಗುತ್ತದೆ. ಸೈಟ್ ವಶಕ್ಕೆ ನೀಡುವಲ್ಲಿ ವಿಳಂಬವಾಗುತ್ತಿದೆ. ಕಾಮಗಾರಿಗಳ ಹಣ ಬಿಡುಗಡೆಯಾಗಿದ್ದರೂ, ಗುತ್ತಿಗೆದಾರರ ಬಿಲ್ ಪಾವತಿಗೆ ಅಧಿಕಾರಿಗಳು ಮತ್ತು ಸರ್ಕಾರ ಅಡ್ಡಿಯಾಗಿದೆ ಎಂದು ದೂರಿದರು.</p>.<p>ಗುತ್ತಿಗೆದಾರ ಜೆಸಿಬಿ ರಾಜಣ್ಣ, ತಾಲ್ಲೂಕಿನಲ್ಲಿ ಬಹುತೇಕ ಗುತ್ತಿಗೆದಾರರು ಕಾಂಗ್ರೆಸ್ ಪಕ್ಷದವರೆ ಇದ್ದಾರೆ. ಶಾಸಕರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಎರಡು ವರ್ಷದಿಂದ ಬಿಲ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.</p>.<p>ಕೃಷ್ಣೆಗೌಡ, ಮಂಜಯ್ಯ, ರುಕ್ಮಾಂಗದ, ನಾಗರಾಜು ವೆಂಕಟೇಶ್, ಪರಮೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>