ಸಭೆಯಲ್ಲಿ ಡಿವೈಎಸ್ಪಿ ಮತ್ತು ಅಮೃತೂರು ಶಮಂತ್ ಗೌಡ ವಿರುದ್ಧ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದಾಗ ದಲಿತ ಮುಖಂಡರಾದ ಯಡವಾಣಿ ಶ್ರೀನಿವಾಸ್ ಮತ್ತು ದಾಸನಪು ವರದರಾಜು ಅವರು ಡಿವೈಎಸ್ಪಿ ಪರ ಮಾತನಾಡಿದರು. ಇದರಿಂದ ಸಿಟ್ಟಿಗೆದ್ದ ದಲಿತ ಮುಖಂಡರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅಧಿಕಾರಿಗಳ ಸಮ್ಮುಖದಲ್ಲಿ ಕೈ ಮಿಲಾಯಿಸುವ ಮಟ್ಟಕ್ಕೆ ಹೋದಾಗ ಪೊಲೀಸರು ಇಬ್ಬರನ್ನೂ ಸಭೆಯಿಂದ ಹೊರಗೆಳೆದುಕೊಂಡು ಹೋದರು.