ಕುಣಿಗಲ್ ತುಮಕೂರು ಜಿಲ್ಲೆಯಲ್ಲಿ ಪ್ರಭಾವಿ ತಾಲ್ಲೂಕಾಗಿದೆ. ಶರಣ ಕುಲಚಕ್ರವರ್ತಿ ಸಿದ್ದಲಿಂಗೇಶ್ವರಸ್ವಾಮಿ ಮೂಲ ನೆಲವೀಡಾಗಿ ಶರಣ ಪರಂಪರೆಗೆ ಬುನಾದಿ ನೀಡಿದೆ. ದೇಶದ ರೇಷ್ಮೆ ಕೃಷಿಗೆ ಮಾತೃಸ್ಥಾನದಲ್ಲಿದೆ. ಜಿಲ್ಲೆಗೆ ಹೇಮಾವತಿ ನೀರನ್ನು ಹೋರಾಟದ ಮೂಲಕ ತಂದು ಗಮನ ಸೆಳೆದಿರುವ ತಾಲ್ಲೂಕನ್ನು ಕೆಲವರ ಹಿತಕ್ಕಾಗಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವುದು ಸೂಕ್ತವಲ್ಲ ಎಂದು ಸಿದ್ದರಾಮ ಚೈತನ್ಯ ಸ್ವಾಮೀಜಿ ದೂರಿದರು.