ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅಡಿಕೆ ತೋಟ ಗುತ್ತಿಗೆ ಪಡೆದುಕೊಳ್ಳಲು ಗಲಾಟೆ, ವ್ಯಕ್ತಿ ಕೊಲೆ

Published 17 ಅಕ್ಟೋಬರ್ 2023, 12:27 IST
Last Updated 17 ಅಕ್ಟೋಬರ್ 2023, 12:27 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ಕುಂಭಯ್ಯನಪಾಳ್ಯದಲ್ಲಿ ಸೋಮವಾರ ರಾತ್ರಿ ಅಡಿಕೆ ತೋಟ ಗುತ್ತಿಗೆ (ಚೇಣಿ) ಪಡೆದುಕೊಳ್ಳುವ ವಿಚಾರಕ್ಕಾಗಿ ಶುರುವಾದ ಗಲಾಟೆ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ.

ಕುಂಭಯ್ಯನಪಾಳ್ಯದ ನಿವಾಸಿ ವಾಸಿಂ ಅಕ್ರಮ್‌ (30) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಇಕ್ರಮ್ ಉಲ್ಲಾ ಖಾನ್‌ ಕೊಲೆ ಮಾಡಿದ ಆರೋಪಿ. ಅಡಿಕೆ ಚೇಣಿ ಮಾಡುವ ವಿಚಾರದಲ್ಲಿ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ. ಈ ವೇಳೆ ಅಕ್ರಮ್ ಮೇಲೆ ಇಕ್ರಮ್‌ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ವಾಸಿಂ ಅಕ್ರಮ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಇಕ್ರಮ್‌ನನ್ನು ಬಂಧಿಸಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT