ಮನವಿ: ಪಾರ್ಕ್ ಕಾಮಗಾರಿ, ನಿರ್ವಹಣೆ ಕೆಲಸವನ್ನು ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯದವರಿಗೆ ಕೊಡಲಾಗುತ್ತಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸೋಲಾರ್ ಬೀದಿದೀಪ ಅಳವಡಿಸಬೇಕು. ಅರಣ್ಯೀಕರಣ ಮಾಡಬೇಕು. ಅಂತರ್ಜಲ ಸಂರಕ್ಷಿಸಲು ಕಾಮಗಾರಿ ನಡೆಸಬೇಕು. ಉತ್ತಮ ಶಾಲೆ, ಕಾಲೇಜುಗಳನ್ನು ಈ ಭಾಗದಲ್ಲಿ ನಿರ್ಮಿಸಬೇಕು. ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಕೆಲಸ ನೀಡಬೇಕು ಎಂದು ರೈತರಾದ ಅಕ್ಕಲಪ್ಪ, ಕೋನಪ್ಪ, ಮಾರುತಿ, ಸುನಿಲ್ ಕುಮಾರ್ ಸಚಿವರಿಗೆ ಮನವಿ ಸಲ್ಲಿಸಿದರು.