<p><strong>ಪಾವಗಡ:</strong> ವಕೀಲರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಕೀಲರು ಪಟ್ಟಣದ ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಕಕ್ಷಿದಾರರಿಗಾಗಿ ಹಗಲಿರುಳು ಶ್ರಮಿಸುವ ವಕೀಲರಿಗೆ ಅಗತ್ಯ ಭದ್ರತೆ, ಸೌಕರ್ಯಗಳಿಲ್ಲ. ಜೀವ ವಿಮೆ, ವೈದ್ಯಕೀಯ ವಿಮೆಯಂತಹ ಸವಲತ್ತುಗಳಿಲ್ಲದೆ ಸಮಸ್ಯೆಯಾದಾಗ ವಕೀಲರ ಕುಟುಂಬಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನನಿರತರು ಆರೋಪಿಸಿದರು.</p>.<p>ತಾಲ್ಲೂಕು, ಜಿಲ್ಲಾ ವಕೀಲರ ಸಂಘಗಳಿಗೆ ಸಾಕಷ್ಟು ಅನುದಾನವಿಲ್ಲದೆ ಸಮಸ್ಯೆಯಾಗುತ್ತಿದೆ. ಈ ಕೂಡಲೇ ವಕೀಲರ ಸಮಸ್ಯೆ ಬಗೆಹರಿಸಬೇಕು. ವೈದ್ಯಕೀಯ, ಜೀವ ವಿಮಾ ಸೌಲಭ್ಯ ಕಲ್ಪಿಸಬೇಕು. ತಾಲ್ಲೂಕು ವಕೀಲರ ಸಂಘಕ್ಕೆ ₹5 ಲಕ್ಷ, ಜಿಲ್ಲಾ ವಕೀಲರ ಸಂಘಗಳಿಗೆ ತಲಾ ₹10 ಲಕ್ಷ ಅನುದಾನ ಮಂಜೂರು ಮಾಡಬೇಕು ಎಂದು ಪ್ರತಿಭಟನನಿರತ ವಕೀಲರು ಒತ್ತಾಯಿಸಿದರು.</p>.<p>ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾಯುಡು, ಖಜಾಂಚಿ ಕೇಶವರೆಡ್ಡಿ, ಶಿರಾಜ್ ಜಾಫರ್, ಸರೋಜ, ಜ್ಯೋತಿ, ಉಘ್ರಮೂರ್ತಿ, ನಾಗೇಂದ್ರರೆಡ್ಡಿ, ರಂಗನಾಥ್, ಸುಧಾಕರ್, ಮಾರುತಿ, ವಾಸುದೇವಮೂರ್ತಿ, ಮಂಜುನಾಥ್, ಮಲ್ಲಿಕಾರ್ಜುನ, ರಾಮಾಂಜಿ, ಸುಬ್ರಹ್ಮಣ್ಯಂ, ಶಿವಣ್ಣ, ನಾರಾಯಣನಾಯ್ಕ, ಹನುಮಂತರಾಯ, ತೇಜಸ್ವಿನಿ, ರೇಖಾ, ರೂಪ, ಅಶ್ವಿನಿ, ಕವಿತ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ವಕೀಲರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಕೀಲರು ಪಟ್ಟಣದ ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಕಕ್ಷಿದಾರರಿಗಾಗಿ ಹಗಲಿರುಳು ಶ್ರಮಿಸುವ ವಕೀಲರಿಗೆ ಅಗತ್ಯ ಭದ್ರತೆ, ಸೌಕರ್ಯಗಳಿಲ್ಲ. ಜೀವ ವಿಮೆ, ವೈದ್ಯಕೀಯ ವಿಮೆಯಂತಹ ಸವಲತ್ತುಗಳಿಲ್ಲದೆ ಸಮಸ್ಯೆಯಾದಾಗ ವಕೀಲರ ಕುಟುಂಬಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನನಿರತರು ಆರೋಪಿಸಿದರು.</p>.<p>ತಾಲ್ಲೂಕು, ಜಿಲ್ಲಾ ವಕೀಲರ ಸಂಘಗಳಿಗೆ ಸಾಕಷ್ಟು ಅನುದಾನವಿಲ್ಲದೆ ಸಮಸ್ಯೆಯಾಗುತ್ತಿದೆ. ಈ ಕೂಡಲೇ ವಕೀಲರ ಸಮಸ್ಯೆ ಬಗೆಹರಿಸಬೇಕು. ವೈದ್ಯಕೀಯ, ಜೀವ ವಿಮಾ ಸೌಲಭ್ಯ ಕಲ್ಪಿಸಬೇಕು. ತಾಲ್ಲೂಕು ವಕೀಲರ ಸಂಘಕ್ಕೆ ₹5 ಲಕ್ಷ, ಜಿಲ್ಲಾ ವಕೀಲರ ಸಂಘಗಳಿಗೆ ತಲಾ ₹10 ಲಕ್ಷ ಅನುದಾನ ಮಂಜೂರು ಮಾಡಬೇಕು ಎಂದು ಪ್ರತಿಭಟನನಿರತ ವಕೀಲರು ಒತ್ತಾಯಿಸಿದರು.</p>.<p>ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾಯುಡು, ಖಜಾಂಚಿ ಕೇಶವರೆಡ್ಡಿ, ಶಿರಾಜ್ ಜಾಫರ್, ಸರೋಜ, ಜ್ಯೋತಿ, ಉಘ್ರಮೂರ್ತಿ, ನಾಗೇಂದ್ರರೆಡ್ಡಿ, ರಂಗನಾಥ್, ಸುಧಾಕರ್, ಮಾರುತಿ, ವಾಸುದೇವಮೂರ್ತಿ, ಮಂಜುನಾಥ್, ಮಲ್ಲಿಕಾರ್ಜುನ, ರಾಮಾಂಜಿ, ಸುಬ್ರಹ್ಮಣ್ಯಂ, ಶಿವಣ್ಣ, ನಾರಾಯಣನಾಯ್ಕ, ಹನುಮಂತರಾಯ, ತೇಜಸ್ವಿನಿ, ರೇಖಾ, ರೂಪ, ಅಶ್ವಿನಿ, ಕವಿತ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>