ವಕೀಲರನ್ನು ಜಿಲ್ಲಾಧಿಕಾರಿ ಮಲತಾಯಿ ಧೋರಣೆಯಿಂದ ನೋಡುತ್ತಿದ್ದಾರೆ. 2021ರಿಂದ ಜಾಗ ಕೇಳುತ್ತಿದ್ದರೂ ಸ್ಪಂದಿಸುತ್ತಿಲ್ಲ. ಅವರು ಕೊಟ್ಟಿರುವ ಗಡುವು ಜುಲೈ 2ಕ್ಕೆ ಮುಗಿಯಲಿದೆ. ಅಷ್ಟರಲ್ಲಿ ನಿರ್ಧಾರ ತಿಳಿಸದಿದ್ದರೆ ನಂತರ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಲಾಗುವುದು- ಎಚ್.ಕೆಂಪರಾಜಯ್ಯ ಅಧ್ಯಕ್ಷ ಜಿಲ್ಲಾ ವಕೀಲರ ಸಂಘ
ಸಿಗದ ಸ್ಪಂದನೆ
ಪ್ರಸ್ತುತ ಕೋರ್ಟ್ ಆವರಣದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಜಾಗ ಮಂಜೂರು ಮಾಡುವಂತೆ ಉಪ ಲೋಕಾಯುಕ್ತರು ಆದೇಶಿಸಿದ್ದಾರೆ. ಅಮಲಾಪುರದ ಬಳಿ ಭೂಮಿ ಮಂಜೂರು ಮಾಡಿಕೊಡಲು ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು ಅನಿವಾರ್ಯ-ಎಂ.ಎಲ್.ರವಿಗೌಡ ಉಪಾಧ್ಯಕ್ಷ ಜಿಲ್ಲಾ ವಕೀಲರ ಸಂಘ