<p>ಕೋರ: ‘ನಮ್ಮ ದೇವರು ಒಪ್ಪಲ್ಲ. ಮುಟ್ಟಾದಾಗ ಮೂರು ದಿನ, ಹೆರಿಗೆಯಾದ ಮೂರು ತಿಂಗಳು ಮನೆಯೊಳಗೆ ಬರಲು ಸಾಧ್ಯವಿಲ್ಲ. ಜುಂಜಪ್ಪ ಒಳ್ಳೆಯದು ಮಾಡುವುದಿಲ್ಲ. ಊರೊಳಗೆ ಬಾರದ ನಾವು ಮನೆಯೊಳಗೆ ಬರಲಾರೆವು...’</p>.<p>ಇದು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ತುಮಕೂರು ವಿ.ವಿ. ಕಲಾ ಕಾಲೇಜು ಸ್ನಾತಕ ಸಮಾಜಕಾರ್ಯ ವಿಭಾಗದಿಂದ ಬುಧವಾರ ನಡೆದ ಕಾಡುಗೊಲ್ಲರ ಹಟ್ಟಿಗಳಲ್ಲಿ ಅರಿವು ಹಾಗೂ ಸಂವಾದದಲ್ಲಿ ಕಾಡುಗೊಲ್ಲ ಸಮುದಾಯದ ಹೆಣ್ಣುಮಕ್ಕಳು ಹೇಳಿದ ಮಾತು.</p>.<p>ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸ್ಸಾ ಮಾತನಾಡಿ, ‘ಜುಂಜಪ್ಪ ನಿಮ್ಮ ರಕ್ಷಣೆಗೆ ಇರುವುದು ಹೊರತು ಶೋಷಣೆಗಲ್ಲ. ಮೌಢ್ಯ, ಸಂಪ್ರದಾಯದ ಹೆಸರಿನ ಕಂದಾಚಾರದಿಂದ ಹೊರಬನ್ನಿ. ಇಲ್ಲವೇ ಕಾನೂನಿನ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಹೆಣ್ಣು ಮುಟ್ಟಾಗದಿದ್ದರೆ ಜಗತ್ತು ಉಳಿಯಲ್ಲ. ಮಗುವಿನ ಹುಟ್ಟು ತಾಯಿಗೆ ಶಾಪವಾಗಬೇಕೆ? ಮನೆಯವರಿಂದ ದೂರವಿದ್ದಾಗ ಬಾಣಂತಿ ಸನ್ನಿ ಕಾಡುವ ಸಾಧ್ಯತೆ ಹೆಚ್ಚು. ನಿಮ್ಮ ಹೆಂಡತಿ, ಮಗಳು, ಸಹೋದರಿಯನ್ನು ಊರಾಚೆ ಕಾಡು ಪ್ರಾಣಿಗಳ ದಾಳಿ, ದೃಷ್ಟರ ದೌರ್ಜನ್ಯದಿಂದ ರಕ್ಷಿಸಿ ಎಂದರು.</p>.<p>‘ಮೈನೆರೆದಾಗ ಬಾಲಕಿಯರನ್ನು ದೂರವಿಟ್ಟರೆ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಮೌಲ್ಯ ನಶಿಸುತ್ತಿವೆ, ಮೌಢ್ಯ ವಿಜೃಂಭಿಸುತ್ತಿದೆ. ಇಂತಹ ಆಚರಣೆಗಳಿಂದ ಪ್ರಾಣ ಬಿಟ್ಟವರ ಸಂಖ್ಯೆ ಹೆಚ್ಚಾಗಬೇಕಾ? ಬಾಣಂತಿ ವಸಂತಳ ಮಡಿಲು ಬರಿದಾಗಿದೆ. ಎರಡೂ ಮಕ್ಕಳು ಮೃತರಾಗಿವೆ. ಅರ್ಥ ಮಾಡಿಕೊಳ್ಳಿ’ ಎಂದು ಮನವಿ ಮಾಡಿದರು.</p>.<p>ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು ನೇತೃತ್ವದಲ್ಲಿ ‘ಮುಟ್ಟಾದಳೇ ಪುಟ್ಟಿ’ ಪ್ರದರ್ಶನ ನಡೆಯಿತು. ಯುವ ಕಲಾವಿದ ಮೋಹನ್ ಅವರು ಜುಂಜಪ್ಪನ ಹಾಡಿಗೆ ನೆರೆದಿದ್ದವರು ಕುಣಿದರು.</p>.<p>‘ನಮ್ಮ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಸ್ಮಶಾನಕ್ಕೆ ಜಾಗ ನೀಡಿ. ಮನೆ, ಗುಡಿಸಲು ಕಟ್ಟಿರುವ ಜಾಗವನ್ನು ಇ– ಸ್ವತ್ತು ಖಾತಾ ಮಾಡಿಕೊಡಲು ಹಲವು ದಾಖಲೆ ಕೇಳುತ್ತಿದ್ದಾರೆ. ಸರಳೀಕರಣಗೊಳಿಸಿ’ ಎಂದು ಗ್ರಾಮಸ್ಥರು ನ್ಯಾಯಾಧೀಶರಿಗೆ ಮನವಿ ಮಾಡಿದರು.</p>.<p>ತುಮಕೂರು ತಾಲ್ಲೂಕು ಗ್ರೇಡ್-2 ತಹಶೀಲ್ದಾರ್ ಕಮಲಮ್ಮ, ತಾಪಂ ಇಒ ಹರ್ಷಕುಮಾರ್, ತಾಲ್ಲೂಕು ಬಿಸಿಎಂ ಅಧಿಕಾರಿ ಗೀತಾ, ಸೋರೆಕುಂಟೆ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ, ಪಿಡಿಒ ಸವಿತಾಬಾಯಿ, ಗಾಯಕ ಮೋಹನ್, ಬೆಳ್ಳಾವಿ ಪಿಎಚ್ಸಿ ವೈದ್ಯಾಧಿಕಾರಿ ಡಾ.ರಾಧಕೃಷ್ಣ, ತುಮಕೂರು ವಿ.ವಿ. ಸಮಾಜ ಕಾರ್ಯ ಶಿಬಿರಾಧಿಕಾರಿ ಸಿದ್ದೇಶ್ ಸಿ. ಇದ್ದರು.</p>.<p>ಏಕಾಏಕಿ ಊರಾಚೆಯ ಗುಡಿಸಲುಗಳನ್ನು ತೆರವುಗೊಳಿಸುವುದು ಸರಿಯಲ್ಲ. ಜೊತೆಗೆ ಒಂದೇ ದಿನದಲ್ಲಿ ಸಂಪ್ರದಾಯದಿಂದ ಹೊರ ಬನ್ನಿ ಎಂದು ಹೇಳುವುದು ಸರಿಯಲ್ಲ. ಅರಿವು ಸಹಕಾರ ಮಾರ್ಗದರ್ಶನ ಅಗತ್ಯ. </p><p>-ಮಂಜುನಾಥ್ ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿ</p>.<p>ಸೌಲಭ್ಯ ಕಲ್ಪಿಸುವುದರ ಜೊತೆಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದು ಹೈಕೋರ್ಟ್ಗೆ ಪತ್ರ ಬರೆಯಲಾಗಿದೆ. ಸರ್ಕಾರದ ಗಮನಕ್ಕೂ ತರಲಾಗಿದೆ. ಶ್ರೀಘ್ರ ಎರಡು ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. </p><p>-ನೂರುನ್ನಿಸ್ಸಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋರ: ‘ನಮ್ಮ ದೇವರು ಒಪ್ಪಲ್ಲ. ಮುಟ್ಟಾದಾಗ ಮೂರು ದಿನ, ಹೆರಿಗೆಯಾದ ಮೂರು ತಿಂಗಳು ಮನೆಯೊಳಗೆ ಬರಲು ಸಾಧ್ಯವಿಲ್ಲ. ಜುಂಜಪ್ಪ ಒಳ್ಳೆಯದು ಮಾಡುವುದಿಲ್ಲ. ಊರೊಳಗೆ ಬಾರದ ನಾವು ಮನೆಯೊಳಗೆ ಬರಲಾರೆವು...’</p>.<p>ಇದು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ತುಮಕೂರು ವಿ.ವಿ. ಕಲಾ ಕಾಲೇಜು ಸ್ನಾತಕ ಸಮಾಜಕಾರ್ಯ ವಿಭಾಗದಿಂದ ಬುಧವಾರ ನಡೆದ ಕಾಡುಗೊಲ್ಲರ ಹಟ್ಟಿಗಳಲ್ಲಿ ಅರಿವು ಹಾಗೂ ಸಂವಾದದಲ್ಲಿ ಕಾಡುಗೊಲ್ಲ ಸಮುದಾಯದ ಹೆಣ್ಣುಮಕ್ಕಳು ಹೇಳಿದ ಮಾತು.</p>.<p>ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸ್ಸಾ ಮಾತನಾಡಿ, ‘ಜುಂಜಪ್ಪ ನಿಮ್ಮ ರಕ್ಷಣೆಗೆ ಇರುವುದು ಹೊರತು ಶೋಷಣೆಗಲ್ಲ. ಮೌಢ್ಯ, ಸಂಪ್ರದಾಯದ ಹೆಸರಿನ ಕಂದಾಚಾರದಿಂದ ಹೊರಬನ್ನಿ. ಇಲ್ಲವೇ ಕಾನೂನಿನ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಹೆಣ್ಣು ಮುಟ್ಟಾಗದಿದ್ದರೆ ಜಗತ್ತು ಉಳಿಯಲ್ಲ. ಮಗುವಿನ ಹುಟ್ಟು ತಾಯಿಗೆ ಶಾಪವಾಗಬೇಕೆ? ಮನೆಯವರಿಂದ ದೂರವಿದ್ದಾಗ ಬಾಣಂತಿ ಸನ್ನಿ ಕಾಡುವ ಸಾಧ್ಯತೆ ಹೆಚ್ಚು. ನಿಮ್ಮ ಹೆಂಡತಿ, ಮಗಳು, ಸಹೋದರಿಯನ್ನು ಊರಾಚೆ ಕಾಡು ಪ್ರಾಣಿಗಳ ದಾಳಿ, ದೃಷ್ಟರ ದೌರ್ಜನ್ಯದಿಂದ ರಕ್ಷಿಸಿ ಎಂದರು.</p>.<p>‘ಮೈನೆರೆದಾಗ ಬಾಲಕಿಯರನ್ನು ದೂರವಿಟ್ಟರೆ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಮೌಲ್ಯ ನಶಿಸುತ್ತಿವೆ, ಮೌಢ್ಯ ವಿಜೃಂಭಿಸುತ್ತಿದೆ. ಇಂತಹ ಆಚರಣೆಗಳಿಂದ ಪ್ರಾಣ ಬಿಟ್ಟವರ ಸಂಖ್ಯೆ ಹೆಚ್ಚಾಗಬೇಕಾ? ಬಾಣಂತಿ ವಸಂತಳ ಮಡಿಲು ಬರಿದಾಗಿದೆ. ಎರಡೂ ಮಕ್ಕಳು ಮೃತರಾಗಿವೆ. ಅರ್ಥ ಮಾಡಿಕೊಳ್ಳಿ’ ಎಂದು ಮನವಿ ಮಾಡಿದರು.</p>.<p>ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು ನೇತೃತ್ವದಲ್ಲಿ ‘ಮುಟ್ಟಾದಳೇ ಪುಟ್ಟಿ’ ಪ್ರದರ್ಶನ ನಡೆಯಿತು. ಯುವ ಕಲಾವಿದ ಮೋಹನ್ ಅವರು ಜುಂಜಪ್ಪನ ಹಾಡಿಗೆ ನೆರೆದಿದ್ದವರು ಕುಣಿದರು.</p>.<p>‘ನಮ್ಮ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಸ್ಮಶಾನಕ್ಕೆ ಜಾಗ ನೀಡಿ. ಮನೆ, ಗುಡಿಸಲು ಕಟ್ಟಿರುವ ಜಾಗವನ್ನು ಇ– ಸ್ವತ್ತು ಖಾತಾ ಮಾಡಿಕೊಡಲು ಹಲವು ದಾಖಲೆ ಕೇಳುತ್ತಿದ್ದಾರೆ. ಸರಳೀಕರಣಗೊಳಿಸಿ’ ಎಂದು ಗ್ರಾಮಸ್ಥರು ನ್ಯಾಯಾಧೀಶರಿಗೆ ಮನವಿ ಮಾಡಿದರು.</p>.<p>ತುಮಕೂರು ತಾಲ್ಲೂಕು ಗ್ರೇಡ್-2 ತಹಶೀಲ್ದಾರ್ ಕಮಲಮ್ಮ, ತಾಪಂ ಇಒ ಹರ್ಷಕುಮಾರ್, ತಾಲ್ಲೂಕು ಬಿಸಿಎಂ ಅಧಿಕಾರಿ ಗೀತಾ, ಸೋರೆಕುಂಟೆ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ, ಪಿಡಿಒ ಸವಿತಾಬಾಯಿ, ಗಾಯಕ ಮೋಹನ್, ಬೆಳ್ಳಾವಿ ಪಿಎಚ್ಸಿ ವೈದ್ಯಾಧಿಕಾರಿ ಡಾ.ರಾಧಕೃಷ್ಣ, ತುಮಕೂರು ವಿ.ವಿ. ಸಮಾಜ ಕಾರ್ಯ ಶಿಬಿರಾಧಿಕಾರಿ ಸಿದ್ದೇಶ್ ಸಿ. ಇದ್ದರು.</p>.<p>ಏಕಾಏಕಿ ಊರಾಚೆಯ ಗುಡಿಸಲುಗಳನ್ನು ತೆರವುಗೊಳಿಸುವುದು ಸರಿಯಲ್ಲ. ಜೊತೆಗೆ ಒಂದೇ ದಿನದಲ್ಲಿ ಸಂಪ್ರದಾಯದಿಂದ ಹೊರ ಬನ್ನಿ ಎಂದು ಹೇಳುವುದು ಸರಿಯಲ್ಲ. ಅರಿವು ಸಹಕಾರ ಮಾರ್ಗದರ್ಶನ ಅಗತ್ಯ. </p><p>-ಮಂಜುನಾಥ್ ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿ</p>.<p>ಸೌಲಭ್ಯ ಕಲ್ಪಿಸುವುದರ ಜೊತೆಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದು ಹೈಕೋರ್ಟ್ಗೆ ಪತ್ರ ಬರೆಯಲಾಗಿದೆ. ಸರ್ಕಾರದ ಗಮನಕ್ಕೂ ತರಲಾಗಿದೆ. ಶ್ರೀಘ್ರ ಎರಡು ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. </p><p>-ನೂರುನ್ನಿಸ್ಸಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>