ಕೋಳಿ ಬೋನಿಗೆ ಬಿದ್ದ ಚಿರತೆ

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದ ಸಮೀಪ ಭಾನುವಾರ ಗಂಡು ಚಿರತೆ ಕೋಳಿ ಬೋನಿಗೆ ಬಿದ್ದಿದೆ.
ಗ್ರಾಮದ ರವಿಶಂಕರ್ ರೆಡ್ಡಿ ಎಂಬುವವರು ಜಮೀನಿನಲ್ಲಿ ಕೋಳಿ ಸಾಕಿದ್ದರು. ನಿತ್ಯ ಕಾಡು ಬೆಕ್ಕು ಬಂದು ಕೋಳಿಯನ್ನು ತಿಂದು ಹೋಗುತ್ತಿತ್ತು. ಕಾಡು ಬೆಕ್ಕನ್ನು ಹಿಡಿಯಲು ರವಿಶಂಕರ್ ರೆಡ್ಡಿ ಕೋಳಿ ಬೋನಿಗೆ ಎರಡು ಕೋಳಿಗಳನ್ನು ಕಟ್ಟಿದ್ದರು. ಆ ಬೋನಿಗೆ ಚಿರತೆ ಬಿದ್ದಿದೆ.
ತಪ್ಪಿಸಿಕೊಳ್ಳಲು ಶತ ಪ್ರಯತ್ನ ಮಾಡಿದೆ. ಆದರೆ, ಸಾಧ್ಯವಾಗಿಲ್ಲ. ಭಾನುವಾರ ರವಿಶಂಕರ್ ರೆಡ್ಡಿ ಕೋಳಿ ಬೋನು ನೋಡಿದಾಗ ಚಿರತೆ ಬಿದ್ದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಅಧಿಕಾರಿಗಳು ಚಿರತೆಯನ್ನು ಸಂರಕ್ಷಿಸಿ ತಿಮ್ಮಾಪುರ ಅರಣ್ಯಧಾಮಕ್ಕೆ ಬಿಟ್ಟರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.