<p><strong>ತುಮಕೂರು</strong>: ಕಾರ್ತಿಕ ಅಮಾವಾಸ್ಯೆ ಅಂಗವಾಗಿ ನಗರದ ಕೆ.ಆರ್.ಬಡಾವಣೆಯ ರಾಮಮಂದಿರದಲ್ಲಿ ಏರ್ಪಡಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಅವರು, ‘ದೀಪೋತ್ಸವವೆಂದರೆ ಹಣತೆಗೆ ಎಣ್ಣೆ, ಬತ್ತಿ ಹಾಕಿ ಅಗ್ನಿಸ್ಪರ್ಶದಿಂದ ಹತ್ತಿಸಿ ಬೆಳಕು ಮೂಡಿಸುವುದು. ಅದೇ ರೀತಿಯಲ್ಲಿ ನಮ್ಮ ನಡವಳಿಕೆಯಿಂದ ಅಂತರಾತ್ಮದಲ್ಲೂ ಬೆಳಕು ಮೂಡಿಸಿಕೊಂಡು ಸಮಾಜಕ್ಕೆ ದಾರಿದೀಪವಾಗಬೇಕು’ ಎಂದು ನುಡಿದರು.</p>.<p>ಕಾರ್ತಿಕ ಮಾಸದ ಅಮಾವಾಸ್ಯೆಯೊಂದಿಗೆ ಬೆಳಕಿನ ಹಬ್ಬದ ಮಾಸವು ಅಂತ್ಯವಾಗುತ್ತಿದೆ. ಈ ದಿನ ಕಗ್ಗತ್ತಲೆಯನ್ನು ಲಕ್ಷದೀಪಗಳನ್ನು ಬೆಳಗುವುದರ ಮೂಲಕ ಓಡಿಸುತ್ತಿರುವುದು ಶ್ಲಾಘನೀಯ ಎಂದರು.</p>.<p>ಭಾವಾಲಯ ತಂಡದ ರೂಪಾ ನಾಗೇಂದ್ರ ಅವರ ಸಾರಥ್ಯದಲ್ಲಿ ವಿದ್ಯಾರ್ಥಿಗಳು ಸುಗಮ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಮಹಾನಗರಪಾಲಿಕೆ ಸದಸ್ಯ ಇನಾಯತ್, ಮಹೇಶ್, ಲಕ್ಷ ದೀಪೋತ್ಸವ ಸಮಿತಿ ಮಂಡಳಿಯ ನಾಗೇಶ್, ವೆಂಕಟಾಚಲಪತಿಶೆಟ್ಟಿ, ಸೂರ್ಯನಾರಾಯಣ, ಬಸವರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಕಾರ್ತಿಕ ಅಮಾವಾಸ್ಯೆ ಅಂಗವಾಗಿ ನಗರದ ಕೆ.ಆರ್.ಬಡಾವಣೆಯ ರಾಮಮಂದಿರದಲ್ಲಿ ಏರ್ಪಡಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಅವರು, ‘ದೀಪೋತ್ಸವವೆಂದರೆ ಹಣತೆಗೆ ಎಣ್ಣೆ, ಬತ್ತಿ ಹಾಕಿ ಅಗ್ನಿಸ್ಪರ್ಶದಿಂದ ಹತ್ತಿಸಿ ಬೆಳಕು ಮೂಡಿಸುವುದು. ಅದೇ ರೀತಿಯಲ್ಲಿ ನಮ್ಮ ನಡವಳಿಕೆಯಿಂದ ಅಂತರಾತ್ಮದಲ್ಲೂ ಬೆಳಕು ಮೂಡಿಸಿಕೊಂಡು ಸಮಾಜಕ್ಕೆ ದಾರಿದೀಪವಾಗಬೇಕು’ ಎಂದು ನುಡಿದರು.</p>.<p>ಕಾರ್ತಿಕ ಮಾಸದ ಅಮಾವಾಸ್ಯೆಯೊಂದಿಗೆ ಬೆಳಕಿನ ಹಬ್ಬದ ಮಾಸವು ಅಂತ್ಯವಾಗುತ್ತಿದೆ. ಈ ದಿನ ಕಗ್ಗತ್ತಲೆಯನ್ನು ಲಕ್ಷದೀಪಗಳನ್ನು ಬೆಳಗುವುದರ ಮೂಲಕ ಓಡಿಸುತ್ತಿರುವುದು ಶ್ಲಾಘನೀಯ ಎಂದರು.</p>.<p>ಭಾವಾಲಯ ತಂಡದ ರೂಪಾ ನಾಗೇಂದ್ರ ಅವರ ಸಾರಥ್ಯದಲ್ಲಿ ವಿದ್ಯಾರ್ಥಿಗಳು ಸುಗಮ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಮಹಾನಗರಪಾಲಿಕೆ ಸದಸ್ಯ ಇನಾಯತ್, ಮಹೇಶ್, ಲಕ್ಷ ದೀಪೋತ್ಸವ ಸಮಿತಿ ಮಂಡಳಿಯ ನಾಗೇಶ್, ವೆಂಕಟಾಚಲಪತಿಶೆಟ್ಟಿ, ಸೂರ್ಯನಾರಾಯಣ, ಬಸವರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>