ಮಾಧುಸ್ವಾಮಿ ಅವರಿಗೆ ಗುರುವಾರ ಕರೆ ಮಾಡಿ ಮಾತನಾಡಿದೆ. ಅವರು ಬೇಜಾರಿನಲ್ಲಿ ಮಾತನಾಡಿದರು. ‘ಮನೆಗೆ ಬರಬೇಡ’ ಎಂದರು. ‘ನಾಲ್ಕು ದಿನಗಳ ಕಳೆದ ನಂತರ, ನಿನ್ನಲ್ಲಿನ ದುಗುಡ ಕಡಿಮೆ ಆದ ಮೇಲೆ ಬರುತ್ತೇನೆ’ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಅವರ ಮನೆಗೆ ಭೇಟಿ ನೀಡಿ, ಚರ್ಚಿಸಲಾಗುವುದು ಎಂದು ವಿ.ಸೋಮಣ್ಣ ಪ್ರತಿಕ್ರಿಯಿಸಿದರು.