ಪಕ್ಕದಲ್ಲಿ ಎರಡು ಖಾಸಗಿ ಶಾಲೆ, ಅಂಗನವಾಡಿ ಕೇಂದ್ರವಿದೆ. ಶಾಲೆಗಳಲ್ಲಿ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಪ್ರವಾಸಿ ಮಂದಿರ, ಕೃಷಿ ಇಲಾಖೆ ಕಚೇರಿ ಮತ್ತು ಎನ್ಇಎಸ್ ಮತ್ತು ನಟರಾಜ ಬಡಾವಣೆ ನಿವಾಸಿಗಳಿಗೆ ಒಂಚರಂಡಿ ಕಲುಷಿತ ಸಂಗ್ರಹವಾಗಿರುವುದರಿಂದ ದುರ್ನಾತ ಬೀರುತ್ತಿದೆ. ಹಗಲಿನಲ್ಲಿಯೇ ಸೊಳ್ಳೆ, ಇಲಿ, ಹೆಗ್ಗಣ ಮನೆಗೆ ನುಗ್ಗುತ್ತಿವೆ. ಪುರಸಭೆ ಅಧಿಕಾರಿಗಳು ಒಳಚರಂಡಿ ದುರಸ್ತಿ ಪಡಿಸಬೇಕು. ಜಲಮೂಲದ ರಕ್ಷಣಗೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.