2015ರಲ್ಲಿ ಯೋಜನೆ ಜಾರಿ ₹50 ಸಾವಿರ ಪ್ರೋತ್ಸಾಹ ಧನ ಅಂಗವಿಕಲರಿಗೆ ಸರ್ಕಾರದ ನೆರವಿನ ಹಸ್ತ
ದೂರವಾಣಿ ಸಂಪರ್ಕ ಕಡಿತ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಕಳೆದು ಎರಡು ತಿಂಗಳಿನಿಂದ ಸಂಬಳ ಬಂದಿಲ್ಲ. ವೇತನ ನಂಬಿಕೊಂಡು ಜೀವನ ಸಾಗಿಸುತ್ತಿದ್ದವರು ಕಂಗಾಲಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಜೀವನ ನಿರ್ವಹಣೆಗಾಗಿ ಸಾಲ ಮಾಡಬೇಕಾಗಿದೆ. ಸರ್ಕಾರದಿಂದ ಇಲಾಖೆಗೆ ಅನುದಾನವು ಸಮರ್ಪಕವಾಗಿ ಬರುತ್ತಿಲ್ಲ. ಕಚೇರಿಯ ದೂರವಾಣಿ ಬಿಲ್ ಪಾವತಿಯಾಗದೆ ಕೆಲ ದಿನಗಳ ಕಾಲ ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿತ್ತು. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಇಲಾಖೆಯ ಕೆಲಸಗಳು ನಡೆಯುತ್ತಿವೆ. ಇಲಾಖೆಗೆ ಬರುವ ಅನುದಾನವೇ ಕಡಿಮೆ ಅದೂ ಕೂಡ ಸೂಕ್ತ ಸಮಯಕ್ಕೆ ಬಾರದೆ ಸಿಬ್ಬಂದಿ ಅಧಿಕಾರಿಗಳು ಪರದಾಡುತ್ತಿದ್ದಾರೆ.