ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಬಂದ ಶಾಸಕ ಡಾ.ರಂಗನಾಥ್ ನೂರಾರು ರೈತರಿಂದ ಮಾಹಿತಿ ಪಡೆದಾಗ, ನಿತ್ಯ 2 ಸಾವಿರ ಕ್ವಿಂಟಲ್ ರಾಗಿ ಬರುತ್ತಿದೆ. ಈಗಾಗಲೇ ನೋಂದಾಯಿಸಿಕೊಂಡ ರೈತರಲ್ಲಿ ರಾಗಿ ಖರೀದಿ ಇದೇ 14ಕ್ಕೆ ಸ್ಥಗಿತಗೊಳ್ಳುತ್ತದೆ ಎಂಬ ವದಂತಿ ಹಬ್ಬಿದ್ದು, ಆತಂಕಗೊಂಡವರೆಲ್ಲ ತಿಳಿಸಿದ ದಿನಕ್ಕಿಂತ ಮೊದಲೆ ರಾಗಿ ತಂದು ಹಾಕಲು ಪ್ರಯತ್ನಿಸುತ್ತಿದ್ದಾರೆ. ಗೋದಾಮಿನ ಸಮಸ್ಯೆ, ರಾಗಿ ಸಾಗಿಸಲು ವಾಹನ, ಗುತ್ತಿಗೆದಾರರ ವೈಫಲ್ಯಗಳ ಬಗ್ಗೆ ರೈತರು ದೂರಿದರು.